ಅಯೋಧ್ಯೆ: ರಾಮಲಲಾನ ‘ಪ್ರಾಣ ಪ್ರತಿಷ್ಠೆ’ ನಂತರ ಅಯೋಧ್ಯೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಇಲ್ಲಿಗೆ ಭಾರೀ ಸಂಖ್ಯೆಯ ಯಾತ್ರಾರ್ಥಿಗಳು ಆಗಮಿಸುವ ನಿರೀಕ್ಷೆ ಇದೆ. ಇದರಿಂದಾಗಿ ಉತ್ತರ ಪ್ರದೇಶದ ಆರ್ಥಿಕತೆಯು ಅಗಾಧವಾದ ಉತ್ತೇಜನ ಪಡೆಯಲಿದೆ.
ರಾಮ ಮಂದಿರ ಮತ್ತು ಇತರ ಪ್ರವಾಸೋದ್ಯಮ ಕೇಂದ್ರಿತ ಉಪಕ್ರಮಗಳಿಂದಾಗಿ, 2024-25ರಲ್ಲಿ ಯುಪಿಯು 25,000 ಕೋಟಿ ರೂಪಾಯಿಗಳಷ್ಟು ತೆರಿಗೆ ಸಂಗ್ರಹವನ್ನು ಕಾಣಬಹುದು ಎಂದು ಎಸ್ಬಿಐ ರಿಸರ್ಚ್ನ ಇತ್ತೀಚಿನ ಪತ್ರಿಕೆಯು ಹೇಳಿದೆ.
“ಅಯೋಧ್ಯೆಯಲ್ಲಿ ರಾಮಮಂದಿರವನ್ನು ಪೂರ್ಣಗೊಳಿಸುವುದು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಯುಪಿ ಸರ್ಕಾರ ಕೈಗೊಂಡ ಬಹು ಉಪಕ್ರಮಗಳು ಪ್ರವಾಸಿಗರ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದಾಗಿ ಉತ್ತರಪ್ರದೇಶದಲ್ಲಿ ವಾರ್ಷಿಕ 25,000 ಕೋಟಿ ರೂಪಾಯಿಗಳ ಹೆಚ್ಚುವರಿ ತೆರಿಗೆ ಆದಾಯವನ್ನು ಕಾಣಬಹುದು” ಎಂದು SBI ಸಂಶೋಧನೆಯು ತನ್ನ ವರದಿಯಲ್ಲಿ ತಿಳಿಸಿದೆ.
ಅಯೋಧ್ಯೆಯಿಂದಾಗಿ ಪ್ರವಾಸೋದ್ಯಮದಲ್ಲಿ ನಿರೀಕ್ಷಿತ ಬೆಳವಣಿಗೆಯಾಗುತ್ತಿದೆ, ಯುಪಿ ಈ ವರ್ಷ ಸುಮಾರು 4 ಲಕ್ಷ ಕೋಟಿ ರೂಪಾಯಿಗಳಷ್ಟು ಶ್ರೀಮಂತಿಕೆ ಹೆಚ್ಚಳವನ್ನು ಕಾಣಬಹುದು ಎಂದು ವರದಿಯು ಹೇಳಿದೆ.
“ವಿಶಾಲವಾದ ಭೂದೃಶ್ಯವನ್ನು ಹೊಂದಿರುವ ಪವಿತ್ರ ಸ್ಥಳಗಳು/ದೇವಾಲಯಗಳೊಂದಿಗೆ, ಯುಪಿ ದೇಶೀಯ ಪ್ರವಾಸೋದ್ಯಮವು ವೇಗದಲ್ಲಿ ಹೆಚ್ಚುತ್ತಿದೆ. ರಾಜ್ಯ ಸರ್ಕಾರದ ಅಂದಾಜಿನ ಪ್ರಕಾರ 2022 ರಲ್ಲಿ ರಾಜ್ಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಸುಮಾರು 32 ಕೋಟಿ (ಅಯೋಧ್ಯೆಯಲ್ಲಿ ಸುಮಾರು 2.21 ಕೋಟಿ ಜನ ಸೇರಿದ್ದಾರೆ)ಯಾಗಿದ್ದು, ಅವರು ಮಾಡಿದ ವೆಚ್ಚ 2 ಲಕ್ಷ ಕೋಟಿ ರೂಪಾಯಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.