ನವದೆಹಲಿ: ಸಾರಿಗೆ ಸಂಸ್ಥೆಗೆ ಸೇರಿದ ಸುಮಾರು 1.5 ಲಕ್ಷ ಡಿಸೇಲ್ ಬಸ್ಗಳನ್ನು ಎಲೆಕ್ಟ್ರಿಕ್ ಬಸ್ಗಳನ್ನಾಗಿ ಪರಿವರ್ತಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ, ಇದರಿಂದಾಗಿ ಬರೋಬ್ಬರಿ 8 ಲಕ್ಷ ಕೋಟಿ ರೂಪಾಯಿ ಕಚ್ಛಾ ಆಮದು ಬಿಲ್ನ್ನು ಕಡಿತ ಮಾಡಬಹುದು ಅಷ್ಟೇ ಅಲ್ಲ ಮಾಲಿನ್ಯವನ್ನೂ ತಡೆಗಟ್ಟಬಹುದಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ’1.5 ಲಕ್ಷ ಸಾರಿಗೆ ಬಸ್ಗಳನ್ನು ಎಲೆಕ್ಟ್ರಿಕ್ ಬ್ಯಾಟರಿ ಆಪರೇಟೆಡ್ ಬಸ್ಗಳಾಗಿ ಪರಿವರ್ತಿಸುವ ಪ್ರಯತ್ನ ನಮ್ಮದು. ಇದರಿಂದ 8 ಲಕ್ಷ ಕಚ್ಛಾ ಮತ್ತು ಪೆಟ್ರೋಲಿಯಂ ಆಮದು ಬಿಲ್ನ್ನು ಕಡಿತ ಮಾಡುಬಹುದು ಮಾತ್ರವಲ್ಲ ಭಾರತವನ್ನು ಮಾಲಿನ್ಯ ಮಕ್ತಗೊಳಿಸಬಹುದು’ ಎಂದಿದ್ದಾರೆ.
ಭಾರತವನ್ನು ಮಾಲಿನ್ಯ ಮುಕ್ತವಾಗಿಸಲು ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ಕೊಡುವ ಅಗತ್ಯವಿದೆ, ಬಯೋ ಡಿಸೇಲ್, ಎಥೆನಾಲ್ನಿಂದ ಚಲಿಸುವ ವಾಹನಗಳನ್ನೂ ಹೆಚ್ಚಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ಇಸ್ರೋದ ಸಹಕಾರದೊಂದಿಗೆ ಸಾರ್ವಜನಿಕ ಬಸ್ಗಳಿಗೆ ವಿದ್ಯುತ್ ನೀಡಲು ಲಿಥಿಯಂ ಐಯಾನ್ ಬ್ಯಾಟರಿಗಳನ್ನು ಹೊರತರಲಾಗುತ್ತಿದೆ. ಅಲ್ಲದೇ ನಮ್ಮ ಇಲಾಖೆ ದೇಶೀಯ ಲಿಥಿಯಂ ಐಯಾನ್ ಬ್ಯಾಟರಿಗಳಿಗೆ ಪೇಟೆಂಟ್ ಪಡೆಯುವ ಪ್ರಯತ್ನ ಪಡುತ್ತಿದ್ದು, ಹೀಗಾದರೆ ಅದರ ದರ 6 ಲಕ್ಷಕ್ಕೆ ಕುಗ್ಗಲಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.