ಚೆನ್ನೈ: ರಷ್ಯಾದೊಂದಿಗಿನ ಪೂರ್ವ ಕಡಲ ಕಾರಿಡಾರ್ನಲ್ಲಿ ತಡೆರಹಿತ ಕಡಲ ವ್ಯಾಪಾರವನ್ನು ಅಭಿವೃದ್ಧಿಪಡಿಸಲು ಮತ್ತು ಖಚಿತಪಡಿಸಿಕೊಳ್ಳಲು ಭಾರತವು ಗಮನಹರಿಸಲಿದೆ ಎಂದು ಕೇಂದ್ರ ಹಡಗು ಬಂದರುಗಳು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್ ಹೇಳಿದ್ದಾರೆ.
ಇಂದು ಚೆನ್ನೈನಲ್ಲಿ ನೌಕಾ ಕಾರಿಡಾರ್ನ ಕಾರ್ಯಾಚರಣೆ ಕುರಿತು ಭಾರತ-ರಷ್ಯಾ ಕಾರ್ಯಾಗಾರದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಸಚಿವರು, ಯಾವುದೇ ರೀತಿಯ ಸವಾಲುಗಳನ್ನು ನಿಭಾಯಿಸಲು ಭಾರತವು ಸಮರ್ಥವಾಗಿದೆ. ದೇಶದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮಾರ್ಗದಲ್ಲಿ ವ್ಯಾಪಾರ ಮತ್ತು ಭದ್ರತೆಯನ್ನು ಸಾಧಿಸಲು ಭಾರತವು ಗರಿಷ್ಠ ಪ್ರಯತ್ನಗಳನ್ನು ಮಾಡುತ್ತಿದೆ. ಕಾರಿಡಾರ್ ಅನ್ನು ಸುಗಮಗೊಳಿಸುವಲ್ಲಿ ಸರ್ಕಾರದ ಪ್ರಯತ್ನಗಳಿಗೆ ಸಂಬಂಧಿಸಿದ ಎಲ್ಲಾ ಸಚಿವಾಲಯಗಳು ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇದು ಭಾರತಕ್ಕೆ ಹೆಚ್ಚಿನ ಅವಕಾಶವನ್ನು ಒದಗಿಸಿದೆ ಮತ್ತು ಸಂಘರ್ಷದ ಸಂದರ್ಭಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ರಷ್ಯಾದ ದೂರದ ಪೂರ್ವ ಮತ್ತು ಆರ್ಕ್ಟಿಕ್ ಅಭಿವೃದ್ಧಿಯ ಉಪ ಮಂತ್ರಿ ಅನಾಟೊಲಿ ಬೊಬ್ರಕೋವ್ ಅವರು, ರಷ್ಯಾವು ಹೆಚ್ಚು ಸಮರ್ಥನೀಯವಾಗಿರುವುದರಿಂದ ಕಡಲ ಮಾರ್ಗಗಳ ಮೇಲೆ ಕೇಂದ್ರೀಕರಿಸಿದೆ. ರಷ್ಯಾದಿಂದ ಉತ್ತರ ಸಮುದ್ರ ಮಾರ್ಗದ ಅಭಿವೃದ್ಧಿಯ ಯೋಜನೆಯನ್ನು ರಷ್ಯಾ ಅಧ್ಯಕ್ಷರು 2035ರವರೆಗೆ ಜಾರಿಗೆ ತಂದಿದ್ದಾರೆ, ಈ ವರ್ಷ 36 ಮಿಲಿಯನ್ ಟನ್ ಸರಕು ಸಾಗಣೆ ಆಗಿದ್ದು ಹೊಸ ದಾಖಲೆಯಾಗಿದೆ ಎಂದರು.
2035ರಲ್ಲಿ 220 ಮಿಲಿಯನ್ ಟನ್ ತಲುಪುವ ಗುರಿ ಹೊಂದಲಾಗಿದೆ ಎಂದ ಅವರು, ಉತ್ತರ ಸಮುದ್ರ ಮಾರ್ಗವನ್ನು ಕಾರ್ಯಗತಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.