ನವದೆಹಲಿ: ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝಕರ್ಬರ್ಗ್ ಅವರು ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ ವೇಳೆ ತಮ್ಮ ಜೀವನ ಕೆಲವೊಂದು ರಹಸ್ಯಗಳನ್ನು ತೆರೆದಿಟ್ಟರು. ಇವುಗಳಲ್ಲಿ ಈ ಹಿಂದೆ ಅವರು ಭಾರತಕ್ಕೆ ಬಂದು ದೇಗುಲಗಳಿಗೆ ಭೇಟಿ ನೀಡಿದ್ದರು ಎಂಬುದೂ ಒಂದು.
ಒಂದು ಕಾಲದಲ್ಲಿ ಫೇಸ್ಬುಕ್ ಸಂಸ್ಥೆ ಸಂಕಷ್ಟದಲ್ಲಿದ್ದಾಗ ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು ಭಾರತದ ಉತ್ತರಾಖಂಡದಲ್ಲಿನ ಆಶ್ರಮಕ್ಕೆ ಭೇಟಿ ಕೊಡುವಂತೆ ನನಗೆ ಸಲಹೆ ನೀಡಿದ್ದರು. ಇದರಿಂದ ಸಂಕಷ್ಟ ದೂರವಾಗುತ್ತದೆ ಎಂದಿದ್ದರು. ಅದರಂತೆ ಭಾರತಕ್ಕೆ ಆಗಮಿಸಿದ ನಾನು ಒಂದು ತಿಂಗಳು ಅಲ್ಲೇ ಇದ್ದು ದೇಗುಲ ಮತ್ತು ಅವರು ಹೇಳಿದ ಆಶ್ರಮಕ್ಕೆ ಭೇಟಿ ಕೊಟ್ಟೆ ಎಂದು ಝಕರ್ಬರ್ಗ್ ಹೇಳಿಕೊಂಡಿದ್ದಾರೆ.
ಭಾರತದ ಜನರನ್ನು ನೋಡಿದೆ, ಅವರ ನಡುವಿನ ಬಾಂಧವ್ಯವನ್ನು ಗಮನಿಸಿದೆ, ಅದೊಂದು ಅದ್ಭುತ ಅನುಭವ ಎಂದರು.
ಆದರೆ ಯಾವ ಆಶ್ರಮ ಎಂದು ಅವರು ಹೇಳಿಲ್ಲ, ಆದರೆ ಮೂಲಗಳ ಪ್ರಕಾರ ಅವರು ಉತ್ತರಾಖಂಡ ಕಾಂಚಿ ಧಾಮ್ ಆಶ್ರಮ್ಗೆ ಭೇಟಿಕೊಟ್ಟಿರುವ ಸಾಧ್ಯತೆ ಇದೆ.
ಸ್ಟೀವ್ ಜಾಬ್ಸ್ ಅವರೂ ತಮ್ಮ ಅನುಭವದ ಮೂಲಕ ಝಕರ್ಬರ್ಗ್ ಅವರಿಗೆಕೀ ಸಲಹೆ ನೀಡಿದ್ದರು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.