ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಮ್ಮ ನಿವಾಸದಲ್ಲಿ ನಡೆದ ವಿಶೇಷ ಸಮಾರಂಭವೊಂದರಲ್ಲಿ ಎಂಟು ವಿಶೇಷ ಅತಿಥಿಗಳಿಗೆ ಸನ್ಮಾನ ಮಾಡಿದ್ದಾರೆ. ಇವರಲ್ಲಿ ಇಬ್ಬರಿಗೆ ತಲಾ 5 ಲಕ್ಷ, ಆರು ಮಂದಿಗೆ ತಲಾ ಒಂದು ಲಕ್ಷವನ್ನು ಬಹುಮಾನವಾಗಿ ನೀಡಿದ್ದಾರೆ.
ಈ ವಿಶೇಷ ಅತಿಥಿಗಳಲ್ಲಿ 13 ವರ್ಷದ ಹರೇಂದರ್ ಕೂಡ ಸೇರಿದ್ದಾನೆ. 9ನೇ ತರಗತಿಯಲ್ಲಿ ಕಲಿಯುತ್ತಿರುವ ಈತ ಫುಟ್ಪಾತ್ನಲ್ಲಿ ತನ್ನ ಪಠ್ಯ ಪುಸ್ತಕ ಮತ್ತು ತೂಕ ನೋಡುವ ಮೆಶಿನ್ನೊಂದಿಗೆ ಕುಳಿತಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಇದರಿಂದಾಗಿ ಈಗ ಆತನಿಗೆ ಸಿಎಂರಿಂದ ನೆರವು ಸಿಕ್ಕಿದೆ.
ಹರೇಂದರ್ ವಿದ್ಯಾಭ್ಯಾಸದಲ್ಲಿ ಅತೀವ ಆಸಕ್ತಿ ಹೊಂದಿರುವವನು. ಆದರೆ ತಂದೆ ಅಂಗವೈಕಲ್ಯದಿಂದ ಬಳಲುತ್ತಿದ್ದು, ಖಾಸಗಿ ಕಂಪನಿಯಲ್ಲಿ ಸಣ್ಣ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮನೆಯ ಸಂಷಕ್ಟವನ್ನು ನಿವಾರಿಸಲು ಕೆಲಸ ಮಾಡುವುದು ಈತನಿಗೆ ಅನಿವಾರ್ಯ. ಹಾಗಾಗೀ ನೊಯ್ಡಾದ ಸಿಟಿ ಸೆಂಟರ್ ಮೆಟ್ರೋ ಸ್ಟೇಶನ್ನಿನಲ್ಲಿ ಶಾಲೆ ಬಿಟ್ಟ ಮೇಲೆ ಬಂದು ಕೂತು ಜನರ ತೂಕ ನೋಡುತ್ತಾನೆ, ಇದು ಇದರಿಂದ ಬಿಡಿಗಾಸು ಸಂಪಾದಿಸುತ್ತಾನೆ. ತನ್ನ ಓದು ಮತ್ತು ಬರೆಯುವಿಕೆಯನ್ನೂ ಅಲ್ಲೇ ಮಾಡುತ್ತಾನೆ.
ಈತನ ಕಷ್ಟದ ಜೀವನವನ್ನು ಗಮನಿಸಿದ ದಾರಿಹೋಕರು ಇವನ ಚಿತ್ರ ತೆಗೆದು ತಮ್ಮ ಫೇಸ್ಬುಕ್ನಲ್ಲಿ ಫೋಟೋ ಹಾಕಿದ್ದರು. ಇದು ಜಾಣತಾಲದೆಲ್ಲೆಡೆ ಹರಿದಾಡಿ ಸುದ್ದಿಯಾಗಿತ್ತು. ಈ ರೀತಿ ಹುಡುಗನಿಗೆ ಓದಲು ಸಹಾಯ ಬೇಕಾದ ವಿಷಯ ತಿಳಿದ ಅಖಿಲೇಶ್ ಹುಡಗನ ನೆರವಿಗೆ ಧಾವಿಸಿ ಆತನಿಗೆ ಸನ್ಮಾನ ಮಾಡಿ 5 ಲಕ್ಷ ನೀಡಿದ್ದಾರೆ. ಈ ಹುಡುಗ ಬೆಳೆದು ದೊಡ್ಡವನಾದ ಮೇಲೆ ಸೈನ್ಯಕ್ಕೆ ಸೇರುವ ಹಂಬಲವಿದೆ ಎಂದು ಹೇಳಿಕೊಂಡಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.