ನವದೆಹಲಿ: ಅಯೋಧ್ಯಾ ರಾಮ ಮಂದಿರ ಚಳುವಳಿಯಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದ ಬಿಜೆಪಿಯ ಮಾಜಿ ಸಂಸದರಾಗಿದ್ದ ಅವೈದ್ಯನಾಥ್ ಅವರ ಸ್ಮರಣಾರ್ಥ ಕೇಂದ್ರ ಶೀಘ್ರದಲ್ಲೇ ಪೋಸ್ಟಲ್ ಸ್ಟ್ಯಾಂಪ್ವೊಂದನ್ನು ಬಿಡುಗಡೆ ಮಾಡಲಿದೆ.
ಅವೈದ್ಯನಾಥ ಅವರ ಮೊದಲ ವರ್ಷದ ಪುಣ್ಯತಿಥಿಯ ಅಂಗವಾಗಿ ಸ್ಟ್ಯಾಂಪ್ ಬಿಡುಗಡೆ ಮಾಡಲಾಗುತ್ತಿದೆ. ಗೋರಖ್ಪುರದ ಹಾಲಿ ಸಂಸದರಾಗಿರುವ ಯೋಗಿ ಆದಿತ್ಯಾನಾಥ್ ಅವರ ತಂದೆ ಹಾಗೂ ಗುರು ಇವರಾಗಿದ್ದರು, ಕಳೆದ ಸೆಪ್ಟಂಬರ್ನಲ್ಲಿ ತಮ್ಮ ೯೫ನೇ ವಯಸ್ಸಿನಲ್ಲಿ ಇವರು ಮೃತರಾಗಿದ್ದರು.
ಅವೈದ್ಯನಾಥ ಅವರು ಗೋರಖ್ಪುರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ, ಗೋರಖ್ನಾಥ ದೇಗುಲದ ಪ್ರಧಾನ ಅರ್ಚಕರೂ ಆಗಿದ್ದರು.
ಇದೇ ವಾರದಲ್ಲಿ ಅವರ ಸ್ಟ್ಯಾಂಪ್ ರಿಲೀಸ್ ಆಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ದಿನೋತ್ಸವದ ಅಂಗವಾಗಿಯೂ ಪೋಸ್ಟಲ್ ಸ್ಟ್ಯಾಂಪ್ ರಿಲೀಸ್ ಆಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.