ಲಕ್ನೋ: ರಾಮ ಮಂದಿರದ ನಿರ್ಮಾಣ ಕಾರ್ಯ ಆರಂಭವಾದ ಬಳಿಕ ಉತ್ತರಪ್ರದೇಶದ ಅಯೋಧ್ಯೆ ನಗರದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಬವಾಗಿದೆ. ಹಲವಾರು ರಾಜ್ಯಗಳು ಅಯೋಧ್ಯೆಯಲ್ಲಿ ಭೂಮಿ ಖರೀದಿಸಲು ಉತ್ತರ ಪ್ರದೇಶ ಸರ್ಕಾರವನ್ನು ಸಂಪರ್ಕಿಸಿವೆ. ಇಲ್ಲಿ ಮಠಗಳು, ಆಶ್ರಮಗಳ ನಿರ್ಮಾಣ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ನಿವೇಶನಗಳ ಹಂಚಿಕೆಗಾಗಿ ಆನ್ಲೈನ್ ನೋಂದಣಿ ಪ್ರಕ್ರಿಯೆಯು ನವೆಂಬರ್ 10 ರಂದು ಪ್ರಾರಂಭವಾಗಲಿದೆ ಎಂದು ವರದಿಗಳು ತಿಳಿಸಿವೆ.
ಮುಂದಿನ ವರ್ಷ ಜನವರಿ 22 ರಂದು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ಉದ್ಘಾಟನೆ ನಡೆಯಲಿದ್ದು, ಹಲವಾರು ರಾಜ್ಯಗಳು ಇಲ್ಲಿ ಅತಿಥಿ ಗೃಹಗಳನ್ನು ಸುತ್ತಮುತ್ತಲ ಪ್ರದೇಶದಲ್ಲಿ ಸ್ಥಾಪಿಸಲು ಆಸಕ್ತಿಯನ್ನು ವ್ಯಕ್ತಪಡಿಸಿವೆ ಎಂದು ವರದಿಗಳು ತಿಳಿಸಿವೆ.
ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಈಗಾಗಲೇ ಪ್ರಸ್ತಾವಿತ ಹೊಸ ಅಯೋಧ್ಯೆ ಗ್ರೀನ್ಫೀಲ್ಡ್ ಟೌನ್ಶಿಪ್ ಯೋಜನೆಯಲ್ಲಿ ರಾಜ್ಯ ಅತಿಥಿ ಗೃಹ ಸ್ಥಾಪನೆಗೆ 6,000 ಚದರ ಮೀಟರ್ ಭೂಮಿಯನ್ನು ಗುಜರಾತ್ಗೆ ಮಂಜೂರು ಮಾಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಯುಪಿ ಹೌಸಿಂಗ್ ಬೋರ್ಡ್ನ ಹೆಚ್ಚುವರಿ ವಸತಿ ಆಯುಕ್ತ ನೀರಜ್ ಶುಕ್ಲಾ ಈ ಬಗ್ಗೆ ಮಾಹಿತಿ ನೀಡಿ, “ಮಧ್ಯಪ್ರದೇಶ, ಮಹಾರಾಷ್ಟ್ರ, ಅಸ್ಸಾಂ, ಸಿಕ್ಕಿಂ, ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶಗಳು ಅಯೋಧ್ಯೆಯಲ್ಲಿ ಭೂ ಹಂಚಿಕೆಗಾಗಿ ರಾಜ್ಯ ಸರ್ಕಾರವನ್ನು ಸಂಪರ್ಕಿಸಿವೆ” ಎಂದಿದ್ದಾರೆ.
ರಾಜ್ಯ ಸರ್ಕಾರವು ನವೆಂಬರ್ 10 ರಂದು ಅಯೋಧ್ಯೆಯಲ್ಲಿ ಹೊಸ ಗ್ರೀನ್ಫೀಲ್ಡ್ ಟೌನ್ಶಿಪ್ ಯೋಜನೆಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ, ಮಠಗಳು, ಆಶ್ರಮಗಳು, ಧರ್ಮಶಾಲಾಗಳು ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಪ್ಲಾಟ್ಗಳ ಹಂಚಿಕೆಗಾಗಿ ಆನ್ಲೈನ್ ಅರ್ಜಿಗಳನ್ನು ಅಂದಿನಿಂದ ಸಕ್ರಿಯಗೊಳಿಸುತ್ತದೆ.
ಖಾಸಗಿ ವ್ಯಕ್ತಿಗಳು ಮತ್ತು ಆಶ್ರಮಗಳು ಸಹ ಈ ಪ್ಲಾಟ್ಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಟೌನ್ಶಿಪ್ ಅನ್ನು ಲಕ್ನೋ-ಗೋರಖ್ಪುರ ಹೆದ್ದಾರಿಯ ಎರಡೂ ಬದಿಗಳಲ್ಲಿ 1,407 ಎಕರೆ ಭೂಮಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ, ಯೋಜನೆಯ ಎರಡನೇ ಹಂತದಲ್ಲಿ 442 ಎಕರೆ ವಿಸ್ತರಣೆಗೆ ಯೋಜಿಸಲಾಗಿದೆ.
“ಮಠಗಳು ಮತ್ತು ಆಶ್ರಮಗಳಿಗೆ ಆನ್ಲೈನ್ ನೋಂದಣಿ ನವೆಂಬರ್ 30 ರಂದು ಮುಕ್ತಾಯಗೊಳ್ಳಲಿದೆ” ಎಂದು ರಾಜ್ಯದ ವಸತಿ ಆಯುಕ್ತ ರಣವೀರ್ ಪ್ರಸಾದ್ ಹೇಳಿದ್ದಾರೆ. “ವಾಣಿಜ್ಯ ಪ್ಲಾಟ್ಗಳನ್ನು ಇ-ಹರಾಜು ಮೂಲಕ ಹಂಚಲಾಗುತ್ತದೆ, ನೋಂದಣಿ ನವೆಂಬರ್ 10 ರಂದು ಪ್ರಾರಂಭವಾಗಿ ನವೆಂಬರ್ 24 ರಂದು ಕೊನೆಗೊಳ್ಳುತ್ತದೆ. ಹರಾಜು ಸ್ವತಃ ನವೆಂಬರ್ 25 ರಂದು ನಡೆಯುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.