ಕಠ್ಮಂಡು: ಭೂಕಂಪದಿಂದ ಸಂಕಷ್ಟಕ್ಕೆ ಸಿಲುಕಿರುವ ನೆರೆಯ ರಾಷ್ಟ್ರ ನೇಪಾಳಕ್ಕೆ ಭಾರತ ನೆರವಿನ ಹಸ್ತ ಚಾಚಿದೆ. ಭೂಕಂಪ ಪೀಡಿತರಿಗಾಗಿ ತುರ್ತು ಪರಿಹಾರ ಸಾಮಗ್ರಿಗಳ ಎರಡನೇ ರವಾನೆಯನ್ನು ಭಾರತ ಹಸ್ತಾಂತರಿಸಿದೆ. ಮೂರು ದಿನಗಳ ಹಿಂದೆಯಷ್ಟೇ ಮೊದಲ ರವಾನೆಯನ್ನು ಕಳುಹಿಸಿಕೊಟ್ಟಿತ್ತು.
ಕಳೆದ ಶುಕ್ರವಾರ ಪಶ್ಚಿಮ ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪವು ಸಂಭವಿಸಿದ ಕಾರಣ 153 ಜನರು ಸಾವಿಗೀಡಾಗಿದ್ದರು ಮತ್ತು 250 ಜನರು ಗಾಯಗೊಂಡಿದ್ದಾರೆ.
ನೆರೆಹೊರೆ ಮೊದಲು ನೀತಿಯೊಂದಿಗೆ ಭಾರತವು ತನ್ನ ನೆರೆಹೊರೆಯಲ್ಲಿನ ಬಿಕ್ಕಟ್ಟುಗಳಿಗೆ ಮೊದಲಿಗನಾಗಿ ಪ್ರತಿಕ್ರಿಯಿಸುತ್ತದೆ ಎಂಬುದಕ್ಕೆ ನೇಪಾಳದಲ್ಲಿ ಭೂಕಂಪ ಪೀಡಿತ ಕುಟುಂಬಗಳಿಗೆ ತುರ್ತು ಪರಿಹಾರ ಸಾಮಗ್ರಿಗಳನ್ನು ಭಾರತ ಹಸ್ತಾಂತರಿಸಿರುವುದೇ ಉದಾಹರಣೆ.
ನೇಪಾಳದ ಡೆಪ್ಯುಟಿ ಚೀಫ್ ಆಫ್ ಮಿಷನ್ ಅವರು ಬ್ಯಾಂಕೆ ಮುಖ್ಯ ಜಿಲ್ಲಾ ಅಧಿಕಾರಿಗೆ ಪರಿಹಾರ ಸಾಮಗ್ರಿಯನ್ನು ಹಸ್ತಾಂತರಿಸಿದರು. ಎರಡನೇ ರವಾನೆಯು 9 ಟನ್ ಪರಿಹಾರ ಸಾಮಗ್ರಿಗಳನ್ನು ಒಳಗೊಂಡಿತ್ತು. 11 ಟನ್ಗಳಿಗಿಂತ ಹೆಚ್ಚಿನ ಪರಿಹಾರ ಸಾಮಗ್ರಿಗಳ ಮೊದಲ ರವಾನೆಯನ್ನು 5 ನೇ ನವೆಂಬರ್ 2023 ರಂದು ನೇಪಾಳ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.