ನವದೆಹಲಿ: ಇಡೀ ದೇಶ ವೀರ ಸೇನಾನಿ ಶಹೀದ್ ಭಗತ್ ಸಿಂಗ್ ಅವರ 108ನೇ ಜನ್ಮದಿನೋತ್ಸವವನ್ನು ಆಚರಿಸುತ್ತಿದೆ. ಇದರ ಬೆನ್ನಲ್ಲೇ ಅವರ ಕುಟುಂಬ ಸದಸ್ಯರೊಬ್ಬರು ಭಗತ್ ಹೆಸರನ್ನು ವಿಮಾನನಿಲ್ದಾಣಕ್ಕೆ ಇಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಂಜಾಬ್ನ ಸಿವಿಲ್ ಏರ್ ಟರ್ಮಿನಲ್ಗೆ ಭಗತ್ ಅವರ ಹೆಸರಿಡಬೇಕೆಂಬುದು ಇವರ ಒತ್ತಾಯವಾಗಿದೆ.
ಭಗತ್ ಸಿಂಗ್ ಅವರ ಸಹೋದರ ಮೊಮ್ಮಗ 57 ವರ್ಷದ ಅಭಯ್ ಸಿಂಗ್ ಅವರು, ’2007 ರಲ್ಲಿ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಅವರ ಹೆಸರನ್ನಿಡಲು ಪಂಜಾಬ್ ಸರ್ಕಾರ ನಿರ್ಧಾರಕೈಗೊಂಡಿತ್ತು. ಬಳಿಕ ಅಸೆಂಬ್ಲಿಯಲ್ಲೂ ಈ ಬಗ್ಗೆ ಅವಿರೋಧ ಅನುಮೋದನೆಯಾಗಿತ್ತು’ ಎಂದಿದ್ದಾರೆ.
ಮೊಹಾಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಭಗತ್ ಹೆಸರಿಡಬೇಕು ಎಂಬುದು ಪಂಜಾಬ್ ಸರ್ಕಾರದ ಒತ್ತಾಯವಾಗಿದೆ.
ಇತ್ತೀಚಿಗೆ ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿವಿಲ್ ಏರ್ ಟರ್ಮಿನಲ್ ಉದ್ಘಾಟಿಸಿದ್ದರು, ಇದೀಗ ಅದಕ್ಕೆ ಭಗತ್ ಹೆಸರನ್ನಿಡಲು ಭಗತ್ ಕುಟುಂಬ ಒತ್ತಾಯಿಸಿದೆ.
ಅಲ್ಲದೇ ಉದ್ಘಾಟನೆಯ ವೇಳೆ ಭಗತ್ ಹೆಸರನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆಕ್ರೋಶಗಳೂ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.