ಲಕ್ನೋ: ಉತ್ತರ ಪ್ರದೇಶ ಸರ್ಕಾರವು ಭಗವಾನ್ ಶ್ರೀರಾಮನ ಅವಳಿ ಮಕ್ಕಳಾದ ಲವ ಮತ್ತು ಕುಶರ ಜನ್ಮಸ್ಥಳದ ಪುನರುಜ್ಜೀವನ ಮತ್ತು ಸಂರಕ್ಷಣೆ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ.
ಕಾನ್ಪುರದ ಬಿಥೂರ್ನಲ್ಲಿರುವ ಮಹರ್ಷಿ ವಾಲ್ಮೀಕಿ ಆಶ್ರಮ, ಮಥುರಾದ ರಾಜಾ ಸೀತಾರಾಮ್ ಮಹಲ್ ಮತ್ತು ಫತೇಪುರ್ನ ಶಿವರಾಜ್ಪುರದಲ್ಲಿರುವ ರಾಸಿಕ್ ಬಿಹಾರಿ ದೇವಸ್ಥಾನವನ್ನು ರಾಜ್ಯ ಸರ್ಕಾರವು ಪುನರುಜ್ಜೀವನಗೊಳಿಸಲಿದೆ.
ಅಧಿಕೃತ ಮೂಲಗಳ ಪ್ರಕಾರ, ವಿವರವಾದ ಯೋಜನೆಯನ್ನು ರೂಪಿಸಲಾಗಿದ್ದು, ಯುಪಿ ರಾಜ್ಯ ಪುರಾತತ್ವ ಇಲಾಖೆ (ಎಸ್ಎಡಿ) ಈ ತಾಣಗಳಲ್ಲಿ ನವೀಕರಣ ಮತ್ತು ಸಂರಕ್ಷಣೆ ಕಾರ್ಯವನ್ನು ಕೈಗೊಳ್ಳಲು ಇ-ಟೆಂಡರ್ ಪ್ರಕ್ರಿಯೆಯ ಮೂಲಕ ಆಸಕ್ತ ಸಂಸ್ಥೆಗಳಿಂದ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಿದೆ.
ಭಗವಾನ್ ಶ್ರೀರಾಮನು ಕಾಡಿಗೆ ಕಳುಹಿಸಿದಾಗ ಮಾತಾ ಜಾನಕಿ ಆಶ್ರಯ ಪಡೆದ ಮತ್ತು ಇಬ್ಬರು ಪುತ್ರರಾದ ಲವ-ಕುಶರಿಗೆಬಿತ್ತೂರ್ನಲ್ಲಿರುವ ಮಹರ್ಷಿ ವಾಲ್ಮೀಕಿಯ ಆಶ್ರಮದಲ್ಲಿ ಜನ್ಮ ನೀಡುತ್ತಾಳೆ. ಇದೀಗ ಈ ಸ್ಥಳದ ಪುನಃಸ್ಥಾಪನೆ ಮತ್ತು ಸಂರಕ್ಷಣೆಗಾಗಿ ಯುಪಿ ರಾಜ್ಯ ಸರ್ಕಾರವು 1.52 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲು ಯೋಜಿಸುತ್ತಿದೆ ಎಂದು ವರದಿಗಳು ಸೂಚಿಸುತ್ತವೆ.
ಮಥುರಾದ ರಾಜಾ ಸೀತಾರಾಮ್ ಮಹಲ್ ನವೀಕರಣ ಮತ್ತು ಸಂರಕ್ಷಣೆಗೆ 1.29 ಕೋಟಿ ವೆಚ್ಚವಾಗಲಿದ್ದು, ಇಎಂಡಿ ಮೊತ್ತವನ್ನು 2.66 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಅದೇ ರೀತಿ, ಫತೇಪುರ್ನ ಶಿವರಾಜ್ಪುರದಲ್ಲಿರುವ ರಸಿಕ್ ಬಿಹಾರಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಸಂರಕ್ಷಣೆಗಾಗಿ ಯೋಗಿ ಸರ್ಕಾರವು 1.97 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದ್ದು, ಈ ಕಾಮಗಾರಿಗೆ ಇಎಂಡಿ ಮೊತ್ತವನ್ನು 4.04 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.
UP BJP Government will restore birthplaces of Lord Ram’s sons in Kanpur by restoring Valmiki Ashram. pic.twitter.com/vtqDYvHzvn
— News Arena India (@NewsArenaIndia) October 26, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.