ನವದೆಹಲಿ: “ಹಣಕ್ಕಾಗಿ ಪ್ರಶ್ನೆ” ವಿವಾದದಲ್ಲಿ ಸಿಲುಕಿರುವ ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಅವರಿಗೆ ಲೋಕಸಭೆಯ ನೈತಿಕ ಸಮಿತಿಯು ಅಕ್ಟೋಬರ್ 31 ರಂದು ಸಮನ್ಸ್ ನೀಡಿದೆ. ಮೊಯಿತ್ರಾ ವಿರುದ್ಧದ ಆರೋಪಗಳು “ತುಂಬಾ ಗಂಭೀರ” ಎಂದು ಸಮಿತಿಯು ಒಪ್ಪಿಕೊಂಡಿದೆ.
ಇಂದು ಸುಮಾರು ಮೂರು ಗಂಟೆಗಳ ಕಾಲ ನಡೆದ ಪ್ರಕ್ರಿಯೆಯಲ್ಲಿ ಸಮಿತಿಯು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಇಬ್ಬರ ಹೇಳಿಕೆಯನ್ನೂ ಆಲಿಸಿದೆ ಮತ್ತು ತೃಣಮೂಲ ಕಾಂಗ್ರೆಸ್ ಸಂಸದರ ವಿರುದ್ಧ ಅವರು ಮಾಡಿರುವ ಆರೋಪಗಳ ಪ್ರತಿಯೊಂದು ಅಂಶವನ್ನು ಚರ್ಚಿಸಿದೆ ಎಂದು ಮೂಲಗಳು ತಿಳಿಸಿವೆ.
ಆಳವಾದ ತನಿಖೆಗಾಗಿ ಪ್ರಕರಣದ ಪ್ರಮುಖ ಅಂಶಗಳ ವಿವರಗಳನ್ನು ಕೋರಿ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಗೃಹ ಸಚಿವಾಲಯಕ್ಕೆ ಪತ್ರಗಳನ್ನು ಕಳುಹಿಸಿದ್ದೇವೆ ಎಂದು ನೈತಿಕ ಸಮಿತಿ ಅಧ್ಯಕ್ಷ ವಿನೋದ್ ಸೋಂಕರ್ ಸುದ್ದಿಗಾರರಿಗೆ ತಿಳಿಸಿದರು.
“ನಾವು ವಕೀಲರು ಮತ್ತು ನಿಶಿಕಾಂತ್ ದುಬೆ ಜಿ ಅವರ ಮಾತುಗಳನ್ನು ಕೇಳಿದ್ದೇವೆ. ಆರೋಪಗಳ ಗಂಭೀರತೆಯನ್ನು ಗಮನಿಸಿ, ನಾವು ಮಂಗಳವಾರ ಮಹುವಾ ಮೊಯಿತ್ರಾ ಅವರನ್ನು ವಿಚಾರಣೆಗೆ ಕರೆಯಲು ನಿರ್ಧರಿಸಿದ್ದೇವೆ. ಅವರು ಬಂದು ವಿಷಯದ ಬಗ್ಗೆ ತಮ್ಮ ಕಡೆಯ ವಾದವನ್ನು ಪ್ರಸ್ತುತಪಡಿಸಬೇಕು” ಎಂದಿದ್ದಾರೆ.
ಉದ್ಯಮಿಯಿಂದ ಹಣವನ್ನು ಪಡೆದು ಮೊಹುವಾ ಅವರು ಸಂಸತ್ತಿನಲ್ಲಿ ಅದಾನಿ, ಮೋದಿ ವಿರುದ್ಧ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬ ಆರೋಪವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.