ನವದೆಹಲಿ: ಶ್ರೀರಾಮನ ಜೀವನ ಮತ್ತು ಮಹತ್ವವನ್ನು ಪ್ರತಿಬಿಂಬಿಸುವ 290 ಸ್ಥಳಗಳಲ್ಲಿ ʼಶ್ರೀರಾಮʼ ಕಲ್ಲಿನ ಕಂಬಗಳನ್ನು ನಿರ್ಮಿಸಲಾಗುವುದು ಎಂದು ಅಶೋಕ್ ಸಿಂಘಾಲ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಗುರುವಾರ ತಿಳಿಸಿದ್ದಾರೆ.
ಮುಖ್ಯವಾದ ವಿಷಯವೆಂದರೆ ಈ ಕಂಬಗಳ ನಿರ್ಮಾಣ ಕಾರ್ಯಕ್ಕೆ ಸರ್ಕಾರದಿಂದ ಹಣವನ್ನು ಬಳಸಲಾಗುವುದಿಲ್ಲ. ಅಶೋಕ್ ಸಿಂಘಾಲ್ ಫೌಂಡೇಶನ್ ಎಲ್ಲಾ ವೆಚ್ಚವನ್ನು ಭರಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಅಶೋಕ್ ಸಿಂಘಾಲ್ ಫೌಂಡೇಶನ್ ಎಂಬ ಟ್ರಸ್ಟ್ ಇದೆ. ರಾಮನ ಜೀವನ ಮತ್ತು ಪ್ರಾಮುಖ್ಯತೆಗೆ ಸಂಬಂಧಿಸಿದ ಸ್ಥಳಗಳಲ್ಲಿ ಕಲ್ಲಿನ ಕಂಬವನ್ನು ನಿರ್ಮಾಣ ಮಾಡುವುದು ಆ ಟ್ರಸ್ಟ್ನ ಕಲ್ಪನೆಯಾಗಿದೆ. ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿತವಾದ ಸ್ಥಳದಲ್ಲಿ ಕಂಬಗಳ ನಿರ್ಮಾಣವಾಗಲಿದೆ. ಆ ಕಲ್ಲುಗಳ ಮೇಲೆ ಸ್ಥಳದ ಮಹತ್ವವನ್ನು ವಿವರಿಸುವ ರಾಮಾಯಣದ ಸಾಲುಗಳನ್ನು ಬರೆಯಲಾಗುತ್ತದೆ. ಸ್ಥಳೀಯ ಸಮಾಜಕ್ಕೆ ಯಾವ ಭಾಷೆ ಅರ್ಥವಾಗುತ್ತದೆಯೋ ಅದರ ಅರ್ಥವನ್ನು ಅದೇ ಭಾಷೆಯಲ್ಲಿ ಕಂಬಗಳ ಮೇಲೆ ಬರೆಯಲಾಗುತ್ತದೆ ಎಂದು ಚಂಪತ್ ರಾಯ್ ಹೇಳಿದ್ದಾರೆ.
ಕಂಬಗಳ ನಿರ್ಮಾಣಕ್ಕೆ ಯಾವುದೇ ಸರ್ಕಾರದಿಂದ ಯಾವುದೇ ಹಣವನ್ನು ಖರ್ಚು ಮಾಡುವುದಿಲ್ಲ ಮತ್ತು ಅಶೋಕ್ ಸಿಂಘಾಲ್ ಪ್ರತಿಷ್ಠಾನದಿಂದ ಎಲ್ಲಾ ವೆಚ್ಚಗಳನ್ನು ಭರಿಲಾಗುವುದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.