ನ್ಯೂಯಾರ್ಕ್: ನ್ಯೂಯಾರ್ಕ್ನಲ್ಲಿ ನಡೆದ ‘ಡಿಸ್ಕೋರ್ಸ್ ಆನ್ ಪೀಸ್ʼ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು, ಶಾಂತಿ ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ತಾತ್ವಿಕ ಪರಂಪರೆಯ ಅಡಿಪಾಯದ ಮೂಲಾಧಾರವಾಗಿದೆ ಎಂದು ಒತ್ತಿ ಹೇಳಿದರು.
ಭಾರತ ಯಾವಾಗಲೂ ಅಹಿಂಸೆ, ಸಾಮರಸ್ಯ ಮತ್ತು ಸಹಬಾಳ್ವೆಯ ಆದರ್ಶಗಳನ್ನು ಅಳವಡಿಸಿಕೊಂಡಿದೆ ಎಂದು ಕಾಂಬೋಜ್ ಹೇಳಿದರು.
ಮಹಾತ್ಮ ಗಾಂಧಿಯವರ ಪ್ರಭಾವವನ್ನು ಮತ್ತಷ್ಟು ಒತ್ತಿಹೇಳಿದ ಅವರು, ಅಹಿಂಸೆಯ ಚಾಂಪಿಯನ್ ಎಂದು ಬಣ್ಣಿಸಿದರು.
“ಭಾರತವು ತನ್ನ ಇತಿಹಾಸದುದ್ದಕ್ಕೂ ಅಹಿಂಸೆ, ಸಾಮರಸ್ಯ ಮತ್ತು ಸಹಬಾಳ್ವೆಯ ಆದರ್ಶಗಳನ್ನು ಅಳವಡಿಸಿಕೊಂಡಿದೆ. ಮಹಾತ್ಮಾ ಗಾಂಧಿಯವರಂತಹ ಮಹಾನ್ ನಾಯಕರ ಬೋಧನೆಗಳು, ಅಹಿಂಸಾತ್ಮಕ ಚಳುವಳಿಯ ಚಾಂಪಿಯನ್ ಆಗಿದೆ ಮತ್ತು ಅವರ ಪ್ರತಿಮೆಯು ಇಲ್ಲಿ ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಸುಂದರವಾದ ಹುಲ್ಲುಹಾಸನ್ನು ಅಲಂಕರಿಸುತ್ತಿದೆ. ಇದು ಸಂಘರ್ಷ ಪರಿಹಾರಕ್ಕೆ ದೇಶದ ವಿಧಾನವನ್ನು ಗಾಢವಾಗಿ ಪ್ರಭಾವಿಸಿದೆ” ಎಂದು ಕಾಂಬೋಜ್ ಹೇಳಿದರು.
ಇದಲ್ಲದೆ, ಅವರು ಪ್ರಧಾನಿ ನರೇಂದ್ರ ಮೋದಿಯವರ ಶಾಂತಿಯ ಹೇಳಿಕೆಯನ್ನು ಎತ್ತಿ ತೋರಿಸಿದರು ಮತ್ತು ಇದು ಮಹಾತ್ಮಾ ಗಾಂಧಿಯವರಂತಹ ಮಹಾನ್ ನಾಯಕರಿಂದ ಪ್ರೇರಿತವಾಗಿದೆ ಎಂದರು.
“ಇಂದಿನ ಯುಗವು ಯುದ್ಧದ ಯುಗವಲ್ಲ” ಎಂಬ ಮೋದಿಯ ಹೇಳಿಕೆಯನ್ನು ಕಾಂಬೋಜ್ ಪುನರುಚ್ಛರಿಸಿದರು.
ಜುಲೈನಲ್ಲಿ, ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ (UNGA) ಶಾಂತಿ ನಿರ್ಮಾಣ ಮತ್ತು ಶಾಂತಿಯನ್ನು ಸುಸ್ಥಿರಗೊಳಿಸುವುದರ ಕುರಿತು ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದ್ದ ರುಚಿರಾ ಕಾಂಬೋಜ್ ಅವರು, ಗ್ಲೋಬಲ್ ಸೌತ್ನೊಂದಿಗೆ ಭಾರತದ USD 40 ಶತಕೋಟಿ ಅಭಿವೃದ್ಧಿ ಯೋಜನೆಗಳು ಮಾನವತೆಗೆ ಅಚಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.
“ಈ ಆಳವಾದ ಮಾನವಮಕೇಂದ್ರಿತ ವಿಧಾನದೊಂದಿಗೆ, ಭಾರತವು ಎಲ್ಲಾ ಶಾಂತಿ ನಿರ್ಮಾಣ ಪ್ರಯತ್ನಗಳಲ್ಲಿ ಸ್ಥಿರವಾದ ವೇಗವರ್ಧಕವಾಗಲು ಬದ್ಧವಾಗಿದೆ” ಎಂದು ಕಾಂಬೋಜ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.