ನವದೆಹಲಿ: ರಾಜ್ಯ ವಕ್ಫ್ ಬೋರ್ಡ್ ಪರಿಚಯಿಸಿದ “ಹೈಬ್ರಿಡ್ ಮಾದರಿ” ಶಿಕ್ಷಣದ ಭಾಗವಾಗಿ ಉತ್ತರಾಖಂಡದ ಮದರಸಾಗಳು ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಕಲಿಸಲಿವೆ. ಹೊಸ ಮಾದರಿಯು NCERT ಪಠ್ಯಕ್ರಮವನ್ನು ಸಹ ಒಳಗೊಂಡಿರುತ್ತದೆ. ಮೊದಲಿಗೆ ನಾಲ್ಕು ಮದರಸಾಗಳಲ್ಲಿ ಈ ಯೋಜನೆ ಜಾರಿಯಾಗಲಿದೆ.
ಪ್ರಾಯೋಗಿಕ ಯೋಜನೆಗಡ ಆಯ್ಕೆಯಾದ ಮದರಸಾಗಳೆಂದರೆ ಡೆಹ್ರಾಡೂನ್ನ ಮುಸ್ಲಿಂ ಕಾಲೋನಿ ಮದರಸ, ರೂರ್ಕಿಯ (ಹರಿದ್ವಾರ) ರಹ್ಮಾನಿಯಾ ಮದರಸಾ, ಖತಿಮಾ, ಯುಎಸ್ನಗರ್ನಲ್ಲಿರುವ ರೆಹಮಾನಿಯಾ ಮದರಸಾ ಮತ್ತು ನೈನಿತಾಲ್ ಜಿಲ್ಲೆಯ ರಾಮನಗರದಲ್ಲಿರುವ ಜಾಮಾ ಮಸೀದಿ ಮದರಸಾ.
“ಉತ್ತರಾಖಂಡದ ವಕ್ಫ್ ಮಂಡಳಿಯು ರಾಜ್ಯದ 117 ವಕ್ಫ್ ಬೋರ್ಡ್ ಮದರಸಾಗಳಲ್ಲಿ NCERT ಪಠ್ಯಕ್ರಮವನ್ನು ಜಾರಿಗೆ ತರಲು ನಿರ್ಧರಿಸಿದೆ. NCERT ಪಠ್ಯಕ್ರಮವು ಸಂಸ್ಕೃತವನ್ನೂ ಒಳಗೊಂಡಿದೆ. ನಮ್ಮ ಮಕ್ಕಳು ಹಿಂದಿ, ಇಂಗ್ಲಿಷ್, ಗಣಿತ, ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಅರೇಬಿಕ್ ಕಲಿಯಲು ಸಾಧ್ಯವಾದರೆ, ಅವರು ಸಂಸ್ಕೃತವನ್ನೂ ಕಲಿಯಬಹುದು” ಎಂದು ಉತ್ತರಾಖಂಡ ವಕ್ಫ್ ಮಂಡಳಿಯ ಅಧ್ಯಕ್ಷ ಶಾದಾಬ್ ಶಾಮ್ಸ್ ಹೇಳಿದ್ದಾರೆ.
ಗುಡ್ಡಗಾಡು ಪ್ರದೇಶದಲ್ಲಿ 117 ಮದರಸಾಗಳು ಸಂಸ್ಕೃತವನ್ನು ಇತರ ವಿಷಯಗಳೊಂದಿಗೆ ಕಲಿಸಲಿವೆ ಎಂದು ಶಾಮ್ಸ್ ಹೇಳಿದರು. ಇಲ್ಲಿಯವರೆಗೆ, ಮದರಸಾಗಳು ಇಸ್ಲಾಮಿಕ್ ಮತ್ತು ಅರೇಬಿಕ್ ಅಧ್ಯಯನಗಳಿಗೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಕಲಿಸುತ್ತಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.