ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು INDIA ಮೈತ್ರಿಕೂಟದ ವಿರುದ್ಧ ಸಂಸತ್ತಿನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದು, ನೀವು ಭಾರತವಲ್ಲ ಭಾರತ ಭ್ರಷ್ಟವಾಗಿಲ್ಲ ಎಂದಿದ್ದಾರೆ.
“ಭಾರತ ಭ್ರಷ್ಟವಾಗಿಲ್ಲ, ಹೀಗಾಗಿ ನೀವು ಭಾರತವಲ್ಲ, ಭಾರತವು ಅರ್ಹತೆಯನ್ನು ನಂಬುತ್ತದೆಯೇ ಹೊರತು ಕುಟುಂಬವಾದದ ರಾಜಕೀಯವನ್ನಲ್ಲ. ಬ್ರಿಟಿಷರಿಗೆ ಹೇಳಿದ್ದನ್ನು ನಿಮ್ಮಂತಹವರು ನೆನಪಿಟ್ಟುಕೊಳ್ಳಬೇಕು – ಭಾರತ ಬಿಟ್ಟು ತೊಲಗಿ, ಭ್ರಷ್ಟಾಚಾರ ಭಾರತ ಬಿಟ್ಟು ತೊಲಗಲಿ, ಕುಟುಂಬ ರಾಜಕೀಯ ಭಾರತ ಬಿಟ್ಟು ತೊಲಗಲಿ. ಅರ್ಹತೆ ಮಾತ್ರ ಈಗ ಭಾರತದಲ್ಲಿ ಸ್ಥಾನ ಪಡೆಯುತ್ತದೆ” ಎಂದಿದ್ದಾರೆ.
1984 ರ ಗಲಭೆಗಳು, ತುರ್ತು ಪರಿಸ್ಥಿತಿ ಮತ್ತು ಗಿರಿಜಾ ಟಿಕೂ ಅವರ ಹತ್ಯೆಯನ್ನು ಉಲ್ಲೇಖಿಸಿದ ಸ್ಮೃತಿ ಇರಾನಿ, ಇದು ರಕ್ತದಲ್ಲಿ ನೆನೆದ ಕಾಂಗ್ರೆಸ್ ಇತಿಹಾಸ ಎಂದು ಹೇಳಿದರು.
“ಗಿರಿಜಾ ಟಿಕೂವ್ ಎಂಬ ಕಾಶ್ಮೀರಿ ಪಂಡಿತೆಯನ್ನು ಕಾಶ್ಮೀರದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದನ್ನು ಸಿನಿಮಾದಲ್ಲಿ ತೋರಿಸಿದಾಗ ಕಾಂಗ್ರೆಸ್ಸಿನ ಕೆಲ ಮುಖಂಡರು ಅಪಪ್ರಚಾರ ಎಂದರು. ಅದೇ ಪಕ್ಷದ ನಾಯಕರು ಇಂದು ಮಣಿಪುರದ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
“ರಾಹುಲ್ ಗಾಂಧಿ ಯಾತ್ರೆ ಕೈಗೊಂಡಿದ್ದಾರೆ ಎಂದು ಇಂದು ಸದನದಲ್ಲಿ ಉಲ್ಲೇಖಿಸಲಾಗಿದೆ ಮತ್ತು ಅವರು ಯಾತ್ರೆ ವೇಳೆ 370 ನೇ ವಿಧಿಯನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದರು. ನಾನು ಸದನದಿಂದ ಓಡಿಹೋದ ವ್ಯಕ್ತಿಗೆ ಹೇಳಲು ಬಯಸುವುದೇನೆಂದರೆ ದೇಶದಲ್ಲಿ ಆರ್ಟಿಕಲ್ 370 ಅನ್ನು ಮರುಸ್ಥಾಪಿಸಲಾಗುವುದಿಲ್ಲ ಅಥವಾ ಕಾಶ್ಮೀರಿ ಪಂಡಿತರನ್ನು “ರಲಿಬ್ ಗಾಲಿಬ್ ಚಾಲಿಬ್ (ಮತಾಂತರ ಮಾಡಿ, ಸಾಯಿಸಿರಿ ಅಥವಾ ಬಿಟ್ಟುಬಿಡಿ) ಎಂದು ಬೆದರಿಕೆ ಹಾಕುವವರನ್ನು ಉಳಿಸುವುದಿಲ್ಲ” ಎಂದು ಸ್ಮೃತಿ ಇರಾನಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.