ಬೆಂಗಳೂರು: ಜೈಲಿನಲ್ಲಿದ್ದ ಯುವಕರನ್ನು ಲಷ್ಕರ್-ಎ-ತೊಯ್ಬಾಗೆ ಸೇರುವಂತೆ ಪ್ರೇರೇಪಿಸಿದ ಕುಖ್ಯಾತ ಭಯೋತ್ಪಾದಕ ಆರೋಪಿ ತಡಿಯಂತವಿಡೆ ನಜೀರ್ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈತ ಯುವಕರಿಗೆ ಭಯೋತ್ಪಾದನಾ ಸಂಘಟನೆಗೆ ಸೇರಲು ಸಹಾಯ ಮಾಡಿದ್ದು ಮಾತ್ರವಲ್ಲದೇ ವಿವಿಧ ರೀತಿಯ ದಾಳಿಗೆ ಯೋಜನೆ ರೂಪಿಸಿದ್ದ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಭಯೋತ್ಪಾದಕ ನಂಟು ಹೊಂದಿರುವ ಐವರು ಯುವಕರನ್ನು ಪೊಲೀಸರು ಬಂಧಿಸಿದ್ದರು. ತಡಿಯಂತವಿಡೆ ನಜೀರ್ ಎಂಬಾತನೇ ಭಯೋತ್ಪಾದನೆಗೆ ಪ್ರಚೋದನೆ ನೀಡಿದ್ದ ಎಂದು ಬಂಧಿತ ಯುವಕರು ಹೇಳಿಕೆ ನೀಡಿದ್ದಾರೆ. ಈ ಯುವಕರು ಉಗ್ರ ದಾಳಿ ನಡೆಸಲು ಯೋಜನೆ ರೂಪಿಸಿದ್ದರು. ಇವರಿಗೆ ಲಷ್ಕರ್ ಜೊತೆ ಸಂಪರ್ಕ ಸಾಧಿಸಲು ನಜೀರ್ ಸಹಾಯ ಮಾಡಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ನಜೀರ್ನಿಂದ ಯುವಕರು ಭಯೋತ್ಪಾದನೆಗೆ ಮುಂದಾಗಿದ್ದರು ಮತ್ತು ಭಯೋತ್ಪಾದನಾ ದಾಳಿಯ ಯೋಜನೆ ಹಿಂದೆ ಆತನ ಕೈವಾಡವಿದೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಕೇಂದ್ರ ಅಪರಾಧ ವಿಭಾಗದ ತಂಡವು ಸುಲ್ತಾನಪಾಳ್ಯದ ಮನೆಯೊಂದರಿಂದ ಐವರು ಯುವಕರನ್ನು ಇತ್ತೀಚಿಗೆ ಬಂಧಿಸಿತ್ತು.
ತಡಿಯಂತವಿಡೆ ನಜೀರ್ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ. ಸದ್ಯ ಅವನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿದ್ದ. 2017ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾದ ಬಳಿಕ ಯುವಕರೊಂದಿಗೆ ಸಂಪರ್ಕ ಸಾಧಿಸಿ ಅವರ ಬೈನ್ ವಾಶ್ ಮಾಡುತ್ತಿದ್ದ, ಈ ವಿಷಯ ಇತ್ತೀಚಿಗೆ ಬಂಧಿತರಾದವರಿಂದ ಪೊಲೀಸರಿಗೆ ತಿಳಿಯಿತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.