ನವದೆಹಲಿ: ‘ಮೋದಿ ಉಪನಾಮ’ಕ್ಕೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಶಿಕ್ಷೆಗೆ ತಡೆ ನೀಡುವಂತೆ ರಾಹುಲ್ ಗಾಂಧಿ ಮಾಡಿದ ಮನವಿಯನ್ನು ತಿರಸ್ಕರಿಸಿದ ಗುಜರಾತ್ ಹೈಕೋರ್ಟ್ನ ನಿರ್ಧಾರವನ್ನು ಬಿಜೆಪಿ ಶುಕ್ರವಾರ ಸ್ವಾಗತಿಸಿದೆ ಮತ್ತು ಇತರರನ್ನು ನಿಂದಿಸುವುದು ಮತ್ತು ಮಾನಹಾನಿ ಮಾಡುವುದು ಕಾಂಗ್ರೆಸ್ ನಾಯಕರ ದೀರ್ಘಕಾಲದ ಅಭ್ಯಾಸ ಎಂದು ಹೇಳಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಕಾಂಗ್ರೆಸ್ ನಾಯಕ ತಮ್ಮ ‘ಮೋದಿ ಉಪನಾಮ’ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿದರು ಮತ್ತು “ಬೇಜವಾಬ್ದಾರಿ ದುರಹಂಕಾರ” ಪ್ರದರ್ಶಿಸಿದರು. ಅವರು ಈ ರೀತಿ ವರ್ತಿಸಿ ಜನರು ಮತ್ತು ಸಂಸ್ಥೆಗಳನ್ನು ದೂಷಿಸಿದರೆ ಕಾನೂನು ಅವರನ್ನು ಹಿಡಿದೇ ಹಿಡಿಯುತ್ತದೆ ಎಂದು ಅವರು ಹೇಳಿದರು.
ಕಾನೂನು ಈಗಾಗಲೇ ರಾಹುಲ್ ಅವರನ್ನು ಹಿಡಿದಿದೆ ಎಂದ ರವಿಶಂಕರ್, ಮಾಜಿ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಏಳು-ಎಂಟು ಮಾನನಷ್ಟ ಪ್ರಕರಣಗಳಿವೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರತಿಷ್ಠಿತ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ನಿಂದಿಸುವುದು ಮತ್ತು ಮಾನಹಾನಿ ಮಾಡುವುದು ಗಾಂಧಿಯವರ ದೀರ್ಘಕಾಲದ ಅಭ್ಯಾಸವಾಗಿದೆ. ವೀರ್ ಸಾವರ್ಕರ್ ಮತ್ತು ಹಿಂದುತ್ವ ಸಂಘಟನೆಯಾದ ಆರ್ಎಸ್ಎಸ್ನಂತಹ ಮಹಾನ್ ದೇಶಭಕ್ತರನ್ನು ಅವರು ಅವಮಾನಿಸಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.