ನವದೆಹಲಿ: ಕಳೆದ ವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಕಾನ್ಸುಲೇಟ್ ಕಚೇರಿಯ ಮೇಲೆ ಖಲಿಸ್ತಾನಿ ಉಗ್ರರು ಮಾಡಿದ ದಾಳಿಗೆ ಸಂಬಂಧಿಸಿದಂತೆ ಭಾರತದಲ್ಲಿನ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಮೆರಿಕಾ ಎಲ್ಲವನ್ನೂ ಮಾಡುತ್ತಿದೆ ಎಂದು ಭರವಸೆ ನೀಡಿದ್ದಾರೆ.
“ನಾನು ಕೂಡ ಒಬ್ಬ ರಾಜತಾಂತ್ರಿಕ, ನಾವು ಯಾವುದೇ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಜನರು ಕೆಲಸ ಮಾಡುವ ಸ್ಥಳಗಳಲ್ಲಿ ದಾಳಿ ಮಾಡುವುದನ್ನು ಅಥವಾ ಬೆಂಕಿಯ ಹಚ್ಚುವ ಕೃತ್ಯಗಳನ್ನು ನೋಡಿ ಸಮ್ಮುನೆ ಕೂರಲಾಗುವುದಿಲ್ಲ. ಕಾನೂನು ಜಾರಿ ಸಂಸ್ಥೆಗಳ ರಾಜತಾಂತ್ರಿಕರನ್ನು ಮತ್ತು ಅವರ ಕುಟುಂಬಗಳನ್ನು ರಕ್ಷಿಸಲು ಅಮೆರಿಕಾ ಎಲ್ಲವನ್ನೂ ಮಾಡುತ್ತದೆ. ತನಿಖೆ ನಡೆಸಲಾಗಿದೆ” ಎಂದು ಗಾರ್ಸೆಟ್ಟಿ ಹೇಳಿದ್ದಾರೆ.
“ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ದಾಳಿ ನಡೆದಾಗ ನಾನು ಪೊಲೀಸ್ ಮುಖ್ಯಸ್ಥರಿಗೆ ಕರೆ ಮಾಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡೆ. ಭವಿಷ್ಯದಲ್ಲಿ ಹಿಂಸಾಚಾರದ ಸಂದರ್ಭಗಳನ್ನು ತಪ್ಪಿಸಲು ನಾವು ಯಾವುದೇ ಅವಕಾಶ ಬಿಡುವುದಿಲ್ಲ” ಎಂದು ಅವರು ಹೇಳಿದರು.
ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ದೂತಾವಾಸದ ಮೇಲೆ ಭಾನುವಾರ ಸ್ಥಳೀಯ ಕಾಲಮಾನ 1:30 ರಿಂದ 2:30 ರ ನಡುವೆ ದಾಳಿ ನಡೆಸಲಾಗಿದೆ. ಹಾನಿಯು ಸೀಮಿತವಾಗಿದ್ದರೂ ಮತ್ತು ಯಾವುದೇ ಭಾರತೀಯ ಸಿಬ್ಬಂದಿ ಗಾಯಗೊಂಡಿಲ್ಲವಾದರೂ, ಘಟನೆಯು ವ್ಯಾಪಕ ಟೀಕೆಗೆ ಕಾರಣವಾಯಿತು. ಪ್ರಮುಖ ವಿದೇಶಿ ಸರ್ಕಾರಿ ಕಚೇರಿ ಕಟ್ಟಡವನ್ನು ಸುರಕ್ಷಿತವಾಗಿರಿಸದಿದ್ದಕ್ಕಾಗಿ ಅನೇಕರು ಬಿಡೆನ್ ಆಡಳಿತವನ್ನು ಪ್ರಶ್ನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.