ನವದೆಹಲಿ: ಉತ್ತರಾಖಂಡದ ಪ್ರಸಿದ್ಧ ಹಣ್ಣು ‘ಕಫಲ್’ ಕಳುಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ದೇವಭೂಮಿ ಉತ್ತರಾಖಂಡದಿಂದ ಕಳುಹಿಸಲಾದ ರಸಭರಿತ ಮತ್ತು ದೈವಿಕ ಋತುಮಾನದ ಹಣ್ಣು ‘ಕಫಲ್’ ಸ್ವೀಕರಿಸಲಾಗಿದೆ ಎಂದು ಸಿಎಂ ಧಾಮಿ ಅವರಿಗೆ ಪತ್ರದಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಪ್ರಕೃತಿಯು ನಮಗೆ ಅಮೋಘವಾದ ಉಡುಗೊರೆಗಳನ್ನು ನೀಡಿದೆ ಮತ್ತು ಉತ್ತರಾಖಂಡವು ಈ ವಿಷಯದಲ್ಲಿ ಮತ್ತಷ್ಟು ಸಿರಿವಂತವಾಗಿದ್ದು ಅಲ್ಲಿನ ಫಲಪುಷ್ಪಗಳು ವೈದ್ಯಕೀಯ ಅಂಶಗಳನ್ನು ಒಳಗೊಂಡಿವೆ. ಕಫಲ್ ಹಣ್ಣಿನ ವೈದ್ಯಕೀಯ ಗುಣಗಳನ್ನು ಪ್ರಾಚೀನ ಆಯುರ್ವೇದ ಪುಸ್ತಕಗಳಲ್ಲೂ ಉಲ್ಲೇಖಿಸಲಾಗಿದೆ ಎಂದಿದ್ದಾರೆ.
ಅಲ್ಲದೆ ಕಫಲ್ ಹಣ್ಣು ಉತ್ತರಾಖಂಡದ ಸಂಸ್ಕೃತಿಯಲ್ಲೂ ಬೆರೆತು ಹೋಗಿದೆ, ವಿವಿಧ ಜನಪದ ಹಾಡುಗಳನ್ನು ಇದರಲ್ಲಿ ಉಲ್ಲೇಖಿಸಲಾಗಿದೆ ಎಂದಿದ್ದಾರೆ. ಉತ್ತರಾಖಂಡಕ್ಕೆ ತೆರಳಿ ಅಲ್ಲಿ ದೊರೆಯುವ ಹಿಮಾಲಯ ಹಣ್ಣುಗಳನ್ನು ಸವೆಯದಿದ್ದರೆ ನಮ್ಮ ಪ್ರಯಾಣ ಅಪೂರ್ಣವಾಗುತ್ತದೆ ಎಂದು ಮೋದಿ ಪುಷ್ಕರದಾಮಿ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.