ಹೈದರಾಬಾದ್: ತೆಲಂಗಾಣದ ಐದು ಕಟ್ಟಡಗಳು ಮತ್ತು ರಚನೆಗಳನ್ನು ಲಂಡನ್ ಮೂಲದ ‘ದಿ ಗ್ರೀನ್ ಆರ್ಗನೈಸೇಶನ್’ ಎಂಬ ಸ್ವತಂತ್ರ ಲಾಭರಹಿತ ಸಂಸ್ಥೆ ನಗರ ಮತ್ತು ರಿಯಲ್ ಎಸ್ಟೇಟ್ ವಲಯದ ಅಡಿಯಲ್ಲಿ ‘ಸುಂದರ ಕಟ್ಟಡಗಳಿಗಾಗಿನ ಅಂತರರಾಷ್ಟ್ರೀಯ ಹಸಿರು ಆ್ಯಪಲ್ ಪ್ರಶಸ್ತಿ’ಗಳಿಗೆ ಆಯ್ಕೆ ಮಾಡಿದೆ.
ಹೆರಿಟೇಜ್ ವಿಭಾಗದಲ್ಲಿ ಮೊಝಮ್-ಜಾಹಿ ಮಾರುಕಟ್ಟೆ ಅತ್ಯುತ್ತಮ ಪುನಃಸ್ಥಾಪನೆ ಮತ್ತು ಮರುಬಳಕೆಗಾಗಿ ಆಯ್ಕೆಯಾಗಿದೆ. ಸೇತುವೆ ವಿಭಾಗದಲ್ಲಿ ದುರ್ಗಮ್ ಚೆರುವು ಕೇಬಲ್ ಸೇತುವೆ ಅದರ ವಿಶಿಷ್ಟ ವಿನ್ಯಾಸಕ್ಕಾಗಿ ಆಯ್ಕೆಯಾಗಿದೆ. ಕಚೇರಿ ಮತ್ತು ಕಾರ್ಯಕ್ಷೇತ್ರ ಕಟ್ಟಡ ವಿಭಾಗದಲ್ಲಿ ಬಿ ಆರ್ ಅಂಬೇಡ್ಕರ್ ತೆಲಂಗಾಣ ರಾಜ್ಯ ಸೆಕ್ರೆಟರಿಯೇಟ್ ಕಟ್ಟಡ ಕಲಾತ್ಮಕ ವಿನ್ಯಾಸಕ್ಕಾಗಿ ಆಯ್ಕೆಯಾಗಿದೆ. ವಿಶಿಷ್ಟ ಕಚೇರಿ ವಿಭಾಗದಲ್ಲಿ ತೆಲಂಗಾಣ ಪೊಲೀಸ್ನ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಆಯ್ಕೆಯಾಗಿದೆ. ಅತ್ಯುತ್ತಮ ಧಾರ್ಮಿಕ ರಚನೆಗಳ ವಿಭಾಗದಲ್ಲಿ ಭಗವಾನ್ ಲಕ್ಷ್ಮಿ ನರಸಿಂಹ ಸ್ವಾಮಿಯ ನಿವಾಸ ಯಾದಾದ್ರಿ ದೇವಸ್ಥಾನ ಆಯ್ಕೆಯಾಗಿದೆ.
ದೇಶದ ಕಟ್ಟಡ ಮತ್ತು ರಚನೆಗೆ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಗ್ರೀನ್ ಆಪಲ್ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಮತ್ತು ತೆಲಂಗಾಣವು ಎಲ್ಲಾ ಐದು ಪ್ರಶಸ್ತಿಗಳನ್ನು ಸ್ವೀಕರಿಸುವ ಗೌರವವನ್ನು ಪಡೆಯುತ್ತಿರುವುದು ನಿಜಕ್ಕೂ ವಿಶೇಷವಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ರಾಜ್ಯ ಸರ್ಕಾರವು ನಿರ್ಮಿಸಿದ ಮತ್ತು ನವೀಕರಿಸಿದ ಐದು ಕಟ್ಟಡಗಳು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ತಿಂಗಳ 16 ರಂದು ಲಂಡನ್ನಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ ಮತ್ತು ಈ ಪ್ರಶಸ್ತಿಗಳನ್ನು ಸ್ವೀಕರಿಸಲು ರಾಜ್ಯ ಸರ್ಕಾರವು ಪೌರಾಡಳಿತ ಮತ್ತು ನಗರಾಭಿವೃದ್ಧಿ ವಿಶೇಷ ಮುಖ್ಯ ಕಾರ್ಯದರ್ಶಿ ಅರವಿಂದ್ ಕುಮಾರ್ ಅವರನ್ನು ನಿಯೋಜಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.