ನವದೆಹಲಿ: ಮಧ್ಯಮ-ಶ್ರೇಣಿಯ ಖಂಡಾಂತರ ಕ್ಷಿಪಣಿ ಅಗ್ನಿ-1 ರ ತರಬೇತಿ ಉಡಾವಣೆ ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ನಿಂದ ಯಶಸ್ವಿಯಾಗಿ ನಡೆಯಿತು ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ದೇಶೀಯವಾಗಿ ಅಭಿವೃದ್ಧಿ ಪಡಿಸಿದ, ಸಣ್ಣ ವ್ಯಾಪ್ತಿಯ, ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಖಂಡಾಂತರ ಕ್ಷಿಪಣಿಯ ಯಶಸ್ವಿ ಉಡಾವಣೆಗೆ ಸಾಕ್ಷಿಯಾಯಿತು. ಗುರುವಾರ ಬೆಳಗ್ಗೆ 8:30ರ ಸಮಯದಲ್ಲಿ, ಕಡಿಮೆ ವ್ಯಾಪ್ತಿಯ ಅಣ್ವಸ್ತ್ರ ಸಿಡಿತಲೆ ಒಯ್ಯುವ ಅಗ್ನಿ-1 ಕ್ಷಿಪಣಿಯನ್ನು ಈ ಮೊದಲು ವೀಲರ್ ದ್ವೀಪ ಎಂದು ಕರೆಯಲ್ಪಡುತ್ತಿದ್ದ, ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದ ಪ್ಯಾಡ್ 4ನಲ್ಲಿದ್ದ ಮೊಬೈಲ್ ಲಾಂಚರ್ನಿಂದ ಉಡಾಯಿಸಲಾಯಿತು.
ಈ ಕ್ಷಿಪಣಿಯ ಉಡಾವಣೆ ತಮ್ಮ ಕಾರ್ಯಾಚರಣಾ ಸಿದ್ಧತೆಯನ್ನು ಪರಿಶೀಲಿಸುವ ಸಲುವಾಗಿ, ಭಾರತೀಯ ಸೇನೆಯ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಕೈಗೊಳ್ಳುವ ಅಭ್ಯಾಸದ ಅಂಗವಾಗಿ ನೆರವೇರಿಸಲಾಯಿತು. ರಕ್ಷಣಾ ಇಲಾಖೆಯ ಅಧಿಕಾರಿಗಳು ಈ ಪರೀಕ್ಷಾ ಉಡಾವಣೆಯನ್ನು ‘ಸಂಪೂರ್ಣ ಯಶಸ್ವಿ’ ಎಂದು ಘೋಷಿಸಿದ್ದು, ಕಾರ್ಯಾಚರಣೆಯು ಎಲ್ಲ ಗುರಿಗಳನ್ನು ಸಮರ್ಥವಾಗಿ ಪೂರೈಸಿದೆ ಎಂದರು.
ಇದು ಎಲ್ಲ ಗುರಿಗಳನ್ನು ಯಶಸ್ವಿಯಾಗಿ ಈಡೇರಿಸಿದ ಅಗ್ನಿ-1 ಕ್ಷಿಪಣಿಯ ಹದಿನೆಂಟನೇ ಆವೃತ್ತಿಯ ಉಡಾವಣೆಯಾಗಿತ್ತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಓ) ಮೂಲಗಳು ನಾವು ಈಗಾಗಲೇ ಭಾರತದ ಅತ್ಯಧಿಕ ವ್ಯಾಪ್ತಿಯ ಅಣ್ವಸ್ತ್ರ ಕ್ಷಿಪಣಿ ಅಗ್ನಿ-5 ಅನ್ನು ಜನವರಿ 18, 2023ರಂದು ಪರೀಕ್ಷಿಸಿರುವುದಾಗಿ ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.