ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ರಾಜ್ಯದ ರಾಜಧಾನಿ ಲಕ್ನೋದಲ್ಲಿ ಸುದೀಪ್ತೋ ಸೇನ್ ನಿರ್ದೇಶನದ ಚಿತ್ರ ‘ದಿ ಕೇರಳ ಸ್ಟೋರಿ’ ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಂಡರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬೆಳಗ್ಗೆ 11.30ಕ್ಕೆ ಲೋಕಭವನ ಸಭಾಂಗಣದಲ್ಲಿ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು, ಅವರೊಂದಿಗೆ ಸರ್ಕಾರದ ಹಲವು ಗಣ್ಯರು ಇದ್ದರು ಎಂದು ವರದಿಗಳು ತಿಳಿಸಿವೆ.
ಸಿಎಂ ಯೋಗಿ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಮಾಡಿದ ಟ್ವೀಟ್ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸದಸ್ಯರು ಚಲನಚಿತ್ರವನ್ನು ಲೋಕಭವನದಲ್ಲಿ ವೀಕ್ಷಿಸುತ್ತಿರುವುದನ್ನು ತೋರಿಸಿದೆ. ಅದಾ ಶರ್ಮಾ ಅಭಿನಯದ ವಿಶೇಷ ಪ್ರದರ್ಶನದಲ್ಲಿ ಯೋಗಿ ಜೊತೆಗೆ ಹಲವಾರು ಗಣ್ಯರು ಭಾಗಿಯಾಗಿದ್ದರು. ಚಿತ್ರವು ಮೊದಲ ಅಧಿಕೃತ ಟ್ರೇಲರ್ ಬಿಡುಗಡೆಯಾದಾಗಿನಿಂದ ತೀವ್ರ ಪ್ರತಿಭಟನೆಗಳು ಮತ್ತು ಟೀಕೆಗಳನ್ನು ಎದುರಿಸುತ್ತಾ ಬಂದಿದೆ. ಆದರೆ ಭರ್ಜರಿ ಪ್ರದರ್ಶನ ಕಂಡು ಮುನ್ನುಗ್ಗುತ್ತಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಹಿಂದೆ ಲಕ್ನೋದಲ್ಲಿ ಕೇರಳ ಸ್ಟೋರಿ ನಿರ್ಮಾಪಕರು ಮತ್ತು ಕಲಾವಿದರನ್ನು ಭೇಟಿ ಮಾಡಿದ್ದರು.
आज अपने मंत्रिमंडल के माननीय सदस्यों के साथ स्पेशल स्क्रीनिंग में ‘The Kerala Story’ फिल्म देखी।
इस फिल्म से जुड़े सभी लोगों का हार्दिक अभिनंदन एवं उन्हें शुभकामनाएं! pic.twitter.com/ySyvud1hqP
— Yogi Adityanath (@myogiadityanath) May 12, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.