ನವದೆಹಲಿ: ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಗಯಾನಾದಲ್ಲಿ ನಿನ್ನೆ ಸಂಜೆ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಯಾನಾ ಉಪಾಧ್ಯಕ್ಷ ಭಾರತ್ ಜಗದೇವ್ ಮತ್ತು ಸ್ಪೀಕರ್ ಮಂಜೂರ್ ನಾದಿರ್ ಅವರಿಗೆ ಜೈಶಂಕರ್ ಧನ್ಯವಾದ ಅರ್ಪಿಸಿದರು.
ಅಲ್ಲದೇ ಈ ಸಂದರ್ಭದಲ್ಲಿ ಜೈಶಂಕರ್ ಅವರು ಭಾರತ-ಗಯಾನಾ ಸ್ನೇಹದ ಸಂಕೇತವಾಗಿ ವೃಕ್ಷವನ್ನು ನೆಟ್ಟರು ಮತ್ತು ಜಾರ್ಜ್ಟೌನ್ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕದಲ್ಲಿ ಅವರಿಗೆ ಗೌರವ ಸಲ್ಲಿಸಿದರು.
ವಿದೇಶಾಂಗ ಸಚಿವ ಜೈಶಂಕರ್ ಪ್ರಸ್ತುತ ನಾಲ್ಕು ಮಧ್ಯ ಮತ್ತು ದಕ್ಷಿಣ ಅಮೆರಿಕ ದೇಶಗಳ ಭೇಟಿಯಲ್ಲಿದ್ದಾರೆ.
ಪನಾಮದಲ್ಲಿ, ಇಂದುಜೈಶಂಕರ್ ಅವರು ದೇಶದ ಉನ್ನತ ನಾಯಕತ್ವವನ್ನು ಭೇಟಿಯಾಲಿದ್ದಾರೆ. ನಾಳೆ ಕೊಲಂಬಿಯಾ ತಲುಪಲಿದ್ದು, ಇದು ಆ ದೇಶಕ್ಕೆ ಮೊದಲ ವಿದೇಶಾಂಗ ಸಚಿವರ ಮಟ್ಟದ ಭೇಟಿಯಾಗಿದೆ. ಅಲ್ಲಿ ಅವರು ಸರ್ಕಾರ, ವ್ಯಾಪಾರ ಮತ್ತು ನಾಗರಿಕ ಸಮಾಜದ ಹಲವಾರು ಉನ್ನತ ಪ್ರತಿನಿಧಿಗಳನ್ನು ಭೇಟಿಯಾಗಲಿದ್ದಾರೆ.
ಅವರ ನಾಲ್ಕು ದೇಶಗಳ ಭೇಟಿಯ ಕೊನೆಯ ಹಂತದಲ್ಲಿ, ಇದೇ ತಿಂಗಳ 27 ರಿಂದ 29 ರವರೆಗೆ ಡೊಮಿನಿಕನ್ ರಿಪಬ್ಲಿಕ್ಗೆ ಭೇಟಿ ನೀಡಲಿದ್ದಾರೆ. 1999 ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ ಇದು ಭಾರತದಿಂದ ಅತ್ಯುನ್ನತ ಮಟ್ಟದ ಮೊದಲ ಭೇಟಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.