ನವದೆಹಲಿ: ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಇಂದು ಛತ್ತೀಸ್ಗಢದ ಬಸ್ತಾರ್ ವಿಭಾಗದ ಪ್ರಧಾನ ಕಛೇರಿಯಾದ ಜಗದಲ್ಪುರದಲ್ಲಿ 84 ನೇ CRPF ದಿನದ ಪರೇಡ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು ಮತ್ತು ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು. ಅಲ್ಲದೇ ಜಗದಲ್ಪುರ ಸಮೀಪದ ಕರಣ್ಪುರದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಕ್ಯಾಂಪಸ್ನಲ್ಲಿ ಪರೇಡ್ ಅನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸಿಆರ್ಪಿಎಫ್ ಪಡೆಯ ಸಿಬ್ಬಂದಿಗೆ ಶೌರ್ಯ ಪದಕಗಳನ್ನು ಹಾಗೂ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಟ್ರೋಫಿಗಳನ್ನು ವಿತರಿಸಿದರು. ಅಲ್ಲದೇ, ಕೇಂದ್ರ ಸಚಿವರು ಕಟ್ಟಡಗಳು ಮತ್ತು ಇತರ CRPF ಮೂಲಸೌಕರ್ಯಗಳನ್ನು ಇ-ಸಮರ್ಪಣೆ ಮಾಡಿದರು.
ಈ ವರ್ಷದ ಪರೇಡ್ ಎರಡನೇ ಬಾರಿಗೆ ದೆಹಲಿಯ ಸಿಆರ್ಪಿಎಫ್ ಪ್ರಧಾನ ಕಚೇರಿಯ ಹೊರಗೆ ನಡೆದಿರುವುದು ವಿಶೇಷ.
ಈ ಸಂದರ್ಭದಲ್ಲಿ, ಕೇಂದ್ರ ಸಚಿವರು ಆಲ್ ಇಂಡಿಯಾ ರೇಡಿಯೊದಿಂದ ಪ್ರಸಾರವಾಗಲಿರುವ ಹಲ್ಬಿ ಉಪಭಾಷೆಯಲ್ಲಿ ವಾರದ ಸುದ್ದಿ ಬುಲೆಟಿನ್ ಅನ್ನು ವರ್ಚುವಲ್ ಆಗಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ದ್ವಿವೇದಿ ಉಪಸ್ಥಿತರಿದ್ದರು. 15 ನಿಮಿಷಗಳ ಅವಧಿಯ ವಾರದ ಸುದ್ದಿ ಬುಲೆಟಿನ್ ಅನ್ನು ಆಲ್ ಇಂಡಿಯಾ ರೇಡಿಯೋ ಜಗದಲ್ಪುರ ಕೇಂದ್ರದಿಂದ ಪ್ರತಿ ಭಾನುವಾರ ಬೆಳಿಗ್ಗೆ 7:30 ಕ್ಕೆ ಪ್ರಸಾರ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.