ಬೀಜಿಂಗ್: ಭಾರತ-ಚೀನಾ ಗಡಿ ಬಿಕ್ಕಟ್ಟಿನ ನಡುವೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚೀನಾದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಮರು ಆಯ್ಕೆಯಾದ ಕ್ಸಿ ಜಿನ್ಪಿಂಗ್ ಅವರಿಗೆ ಕ್ರಾಂತಿಕಾರಿ ಶುಭಾಶಯಗಳನ್ನು ಕಳುಹಿಸಿದ್ದಾರೆ.
ಟ್ವೀಟ್ ಮಾಡಿರುವ ಪಿಣರಾಯಿ ಅವರು, ವಿಶ್ವ ರಾಜಕೀಯದಲ್ಲಿ ಚೀನಾದ ಪ್ರಮುಖ ಪಾತ್ರವನ್ನು ಶ್ಲಾಘಿಸಿದ್ದಾರೆ ಮತ್ತು ಸ್ಮಾರ್ಟ್ ಚೀನಾಕ್ಕಾಗಿ ಅಧ್ಯಕ್ಷರ ಪ್ರಯತ್ನಗಳು ಯಶಸ್ಸು ಕಾಣಲಿ ಎಂದು ಬಯಸಿದ್ದಾರೆ.
“ಮೂರನೇ ಬಾರಿಗೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಧ್ಯಕ್ಷರಾಗಿ ಆಯ್ಕೆಯಾದ ಕಾಮ್ರೇಡ್ ಕ್ಸಿ ಜಿನ್ಪಿಂಗ್ಗೆ ಕ್ರಾಂತಿಕಾರಿ ಶುಭಾಶಯಗಳು. ಚೀನಾ ವಿಶ್ವ ರಾಜಕೀಯದಲ್ಲಿ ಪ್ರಮುಖ ಧ್ವನಿಯಾಗಿ ಮಾರ್ಪಟ್ಟಿದೆ ಮತ್ತು ಇದು ಶ್ಲಾಘನೀಯವಾಗಿದೆ. ಸ್ಮಾರ್ಟ್ ಚೀನಾಕ್ಕಾಗಿ ಅವರ ನಿರಂತರ ಪ್ರಯತ್ನಗಳಲ್ಲಿ ಯಶಸ್ಸನ್ನು ಬಯಸುತ್ತೇವೆ ”ಎಂದು ಮುಖ್ಯಮಂತ್ರಿ ಪಿಣರಾಯಿ ಟ್ವೀಟ್ ಮಾಡಿದ್ದಾರೆ.
ಭಾರತ ಮತ್ತು ಚೀನಾ ಲಡಾಖ್ನಲ್ಲಿ ಗಡಿ ವಿವಾದವನ್ನು ಎದುರಿಸುತ್ತಿರುವ ಸಮಯದಲ್ಲಿ ಕೇರಳ ಸಿಎಂ ಶುಭ ಕೋರಿ ಟ್ವಿಟ್ ಮಾಡಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ
ಶುಕ್ರವಾರ ಚೀನಾದ ಸಂಸತ್ತು ಅಧ್ಯಕ್ಷ ಕ್ಸಿಗೆ ಅಭೂತಪೂರ್ವ ಮೂರನೇ ಐದು ವರ್ಷಗಳ ಅವಧಿಯನ್ನು ಸರ್ವಾನುಮತದಿಂದ ಅನುಮೋದಿಸಿದೆ.
Revolutionary greetings to President Xi Jinping on his re-election as the President of the People's Republic of China. It is truly commendable that China has emerged as a prominent voice in global politics. Best wishes for the continued efforts to achieve a more prosperous China.
— Pinarayi Vijayan (@pinarayivijayan) March 12, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.