News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇತರ ದೇಶಗಳಿಗಿಂತ ಹೆಚ್ಚು ಸಹಾಯ ಭಾರತ ಮಾಡಿದೆ: ಶ್ರೀಲಂಕಾ ಸಚಿವ

ನವದೆಹಲಿ: ತೀವ್ರ ಸ್ವರೂಪದ ಆರ್ಥಿಕ ಬಿಕ್ಕಟ್ಟಿನಿಂದ ಕುಸಿದು ಹೋಗಿರುವ ಶ್ರೀಲಂಕಾಕ್ಕೆ ಇತರ ಯಾವುದೇ ದೇಶಗಳಿಗಿಂತ ಭಾರತ ಹೆಚ್ಚು ಸಹಾಯ ಮಾಡಿದೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಹೇಳಿದ್ದಾರೆ.

ರೈಸಿನಾ ಸಂವಾದ ‘ಐಡಿಯಾಸ್ ಪಾಡ್’ನಲ್ಲಿ ಮಾತನಾಡಿದ ಅವರು, “ಭಾರತ ಸರ್ಕಾರವು ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಸಹಾಯ ಮಾಡಲು ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರೆ, ಭಾರತೀಯ ಜನರು ಸಹ ಶ್ರೀಲಂಕಾವನ್ನು ಬೆಂಬಲಿಸಲು ಮುಂದೆ ಬಂದರು ಎಂದಿದ್ದಾರೆ.

“ಕೆಟ್ಟ ಸಮಯ ಬಂದಾಗ ನಿಮ್ಮ ನಿಜವಾದ ಸ್ನೇಹಿತರು ಪರೀಕ್ಷೆಗೆ ಒಳಗಾಗುತ್ತಾರೆ. ಭಾರತ ನಮ್ಮ ಬೆಂಬಲಕ್ಕೆ ನಿಂತಿದೆ, ಅಗತ್ಯಕ್ಕಾಗುವ ಸ್ನೇಹಿತನೇ ನಿಜವಾದ ಸ್ನೇಹಿತ. ಹಾಗಾಗಿ ಭಾರತವು ನಮಗಾಗಿ ಮಾಡಿದ ಸಹಾಯಕ್ಕೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ” ಎಂದಿದ್ದಾರೆ.

ದ್ವೀಪ ರಾಷ್ಟ್ರಕ್ಕೆ ಸುಮಾರು 3.9 ಶತಕೋಟಿ ಮೌಲ್ಯದ ದ್ವಿಪಕ್ಷೀಯ ಸಾಲ ಮತ್ತು ಮಾನ್ಯತೆಯನ್ನು ಒದಗಿಸುವ ಮೂಲಕ ಭಾರತ ಸರ್ಕಾರವು ಕೆಲವು ದಿಟ್ಟ, ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವರು ಹೇಳಿದ್ದಾರೆ.

ಅಲ್ಲದೇ ಭಾರತ ನೀಡಿದ ಸಾಲ ಶ್ರೀಲಂಕಾಕ್ಕೆ ಯುದ್ಧದಲ್ಲಿ ಹೋರಾಡಲು ಜೀವಸೆಲೆ ನೀಡಿದೆ, ಇದು ಬಹುಶಃ ದಿವಾಳಿಯಾದ ದೇಶವನ್ನು ರಕ್ಷಿಸಿದೆ ಎಂದು ಅವರು ಬಣ್ಣಿಸಿದ್ದಾರೆ.

ಸಾಲದ ಸುಳಿಯಲ್ಲಿ ಮುಳುಗಿರುವ ಶ್ರೀಲಂಕಾವನ್ನು ರಕ್ಷಿಸುವಲ್ಲಿ ಭಾರತದ ಪ್ರಯತ್ನವನ್ನು ಸ್ಮರಿಸಿದ ಸಬ್ರಿ, ಭಾರತವು ಪ್ರಾರಂಭದಲ್ಲಿಯೇ ಸಹಾಯಕ್ಕೆ ಬಂದಿತು. ಇತರ ದೇಶಗಳಿಗಿಂತ ಭಾರತದ ಸಹಾಯ ಹೆಚ್ಚಾಗಿದೆ. ಭಾರತವು ಅಂತರರಾಷ್ಟ್ರೀಯ ಹಣಕಾಸು ನಿಧಿಗೆ (IMF) ಹಣಕಾಸು ಭರವಸೆಗಳನ್ನು ಕಳುಹಿಸಿತು, ಬಿಕ್ಕಟ್ಟಿನಿಂದ ಬಳಲುತ್ತಿರುವ ದ್ವೀಪ ರಾಷ್ಟ್ರದ ಸಾಲದ ಪುನರ್ರಚನೆ ಕಾರ್ಯಕ್ರಮವನ್ನು ಅಧಿಕೃತವಾಗಿ ಬೆಂಬಲಿಸಿದ ಶ್ರೀಲಂಕಾದ ಸಾಲದಾತರಲ್ಲಿ ಭಾರತ ಮೊದಲನೆಯದು ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top