ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ದೆಹಲಿಯ ಟಾಲ್ಕಟೋರ ಸ್ಟೇಡಿಯಂನಲ್ಲಿ ದೆಹಲಿ ಕರ್ನಾಟ ಸಂಘ ಆಯೋಜಿಸಿರುವ ಎರಡು ದಿನಗಳ “ಬಾರಿಸು ಕನ್ನಡ ಡಿಂಡಿಮವ” ಸಾಂಸ್ಕೃತಿಕ ಉತ್ಸವವನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಮೋದಿ, “ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕ ಜನರ ಕೊಡುಗೆ ಸಾಕಷ್ಟಿದೆ. ಪುರಾಣ ಕಾಲದಿಂದ ಕರ್ನಾಟಕದಲ್ಲಿ ಹನುಮನ ಮಾತಿದೆ. ಹನುಮಂತನ ಹೊರತಾಗಿ ರಾಮನಿಲ್ಲ, ರಾಮಾಯಣವಿಲ್ಲ. ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ನಾಡಗೀತೆ ಅದ್ಭುತವಾದುದು. ಅದರಲ್ಲಿ ಭಾರತದ ಸಭ್ಯತೆಯ ಉಲ್ಲೇಖವಿದೆ. ಇಡೀ ಭಾರತ ಹಾಗೂ ಕರ್ನಾಟಕದ ವಿವರಣೆಯನ್ನು ಒಳಗೊಂಡಿದೆ. ಏಕ್ ಭಾರತ್ ಶ್ರೇಷ್ಠ ಭಾರತ್ ಸಂದೇಶವನ್ನು ಸಾರುತ್ತದೆ” ಎಂದಿದ್ದಾರೆ.
“ಭಾರತದ ಗುರುತು, ಭಾರತದ ಪರಂಪರೆ, ಭಾರತದ ಪ್ರೇರಣೆಯಲ್ಲಿ ಕರ್ನಾಟಕವನ್ನು ಹೊರತುಪಡಿಸಿ ನಾವು ಭಾರತವನ್ನು ವಿಶ್ಲೇಷಿಸಲು ಸಾಧ್ಯವಿಲ್ಲ. ರಾಣಿ ಅಬ್ಬಕ್ಕ, ರಾಣಿ ಚೆನ್ನಮ್ಮ, ಒಣಕೆ ಒಬವ್ವ ಪರಕೀಯರ ವಿರುದ್ಧ ಹೋರಾಡಿ ಜನರ ರಕ್ಷಣೆಗಾಗಿ ಗೋಡೆಯಂತೆ ನಿಂತರು” ಎಂದಿದ್ದಾರೆ.
“ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಕೊಡುಗೆ ಅಪಾರವಾಗಿದ್ದು, ದೇಶ ಕಟ್ಟುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಕನ್ನಡಿಗರಿಗೆ ನಾನು ನಮಿಸುತ್ತೇನೆ. ಪೌರಾಣಿಕ ಕಾಲದಿಂದಲೂ ಕರ್ನಾಟಕವು ದೇಶದ ಅತ್ಯಂತ ಪ್ರಮುಖ ಭಾಗವಾಗಿದ್ದು, ಈ ದೇಶವನ್ನು ಮುನ್ನಡೆಸಲು ತನ್ನದೇ ಆದ ಕೊಡುಗೆಯನ್ನು ನೀಡಿದೆ” ಎಂದರು.
ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ನಾಡಗೀತೆ ಅದ್ಭುತವಾದುದು. ಅದರಲ್ಲಿ ಭಾರತದ ಸಭ್ಯತೆಯ ಉಲ್ಲೇಖವಿದೆ. ಇಡೀ ಭಾರತ ಹಾಗೂ ಕರ್ನಾಟಕದ ವಿವರಣೆಯನ್ನು ಒಳಗೊಂಡಿದೆ. ಏಕ್ ಭಾರತ್ ಶ್ರೇಷ್ಠ ಭಾರತ್ ಸಂದೇಶವನ್ನು ಸಾರುತ್ತದೆ ಎಂದರು.
ಇಂದು ಭಾರತ ಪ್ರಜಾಪ್ರಭುತ್ವ ತಾಯಿ ಎಂದು ಕರೆಯಲ್ಪಡುತ್ತಿದೆ. ಅನುಭವ ಮಂಟಪ ಸ್ಥಾಪಿಸಿದ ಭಗವಾನ್ ಬಸವೇಶ್ವರರ ಪ್ರಜಾಪ್ರಭುತ್ವದ ಕಡೆಗಿನ ದೂರದೃಷ್ಟಿಯೂ ಪ್ರಕಾಶಮಾನವಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.