ನವದೆಹಲಿ: ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಇಂದು ಭಾರತಕ್ಕೆ ಆಗಮಿಸಿದ್ದು, ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ಸ್ಕೋಲ್ಜ್ ಅವರನ್ನು ಬರಮಾಡಿಕೊಂಡರು, ಅಲ್ಲಿ ಅವರಿಗೆ ಔಪಚಾರಿಕ ಸ್ವಾಗತವನ್ನು ನೀಡಲಾಯಿತು. ಕಾರ್ಯಕ್ರಮದ ವೇಳೆ ಇತರ ಸಚಿವರನ್ನೂ ಕೂಡ ಚಾನ್ಸೆಲರ್ ಸ್ಕೋಲ್ಜ್ ಭೇಟಿಯಾದರು.
ಎರಡು ದೇಶಗಳು ಈಗಾಗಲೇ ಉತ್ತಮ ಸಂಬಂಧವನ್ನು ಹೊಂದಿವೆ, ತಮ್ಮ ಎರಡು ದಿನಗಳ ಭೇಟಿಯಲ್ಲಿ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಎದುರು ನೋಡುವುದಾಗಿ ಅವರು ಸ್ಕೋಲ್ಜ್ ಹೇಳಿದ್ದಾರೆ.
“ನಾವು ಈಗಾಗಲೇ ಭಾರತ ಮತ್ತು ಜರ್ಮನಿ ನಡುವೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ನಾವು ಈ ಉತ್ತಮ ಸಂಬಂಧವನ್ನು ಬಲಪಡಿಸುತ್ತೇವೆ ಮತ್ತು ನಮ್ಮ ದೇಶಗಳ ಅಭಿವೃದ್ಧಿಗೆ ಮತ್ತು ವಿಶ್ವದ ಶಾಂತಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ನಾವು ಚರ್ಚಿಸುತ್ತೇವೆ ಎಂದು ನಾನು ಭಾವಿಸುತ್ತೇವೆ” ಎಂದು ಅವರು ದೆಹಲಿಗೆ ಬಂದ ಬಳಿಕ ಹೇಳಿಕೆ ನೀಡಿದ್ದಾರೆ.
ಡಿಸೆಂಬರ್ 2021 ರಲ್ಲಿ ಜರ್ಮನ್ ಚಾನ್ಸೆಲರ್ ಆದ ನಂತರ ಸ್ಕೋಲ್ಜ್ ಅವರ ಮೊದಲ ಭಾರತ ಭೇಟಿ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.