News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್‌ ಜೀವಂತವಾಗಿದ್ದಾನೆ: ತಮಿಳು ನಾಯಕನ ಅಚ್ಚರಿಯ ಹೇಳಿಕೆ

ಚೆನ್ನೈ:‌ ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್  ಬದುಕಿದ್ದಾನೆ ಮತ್ತು ಆರೋಗ್ಯವಾಗಿದ್ದಾನೆ ಎಂದು ಹೇಳುವ ಮೂಲಕ ಶ್ರೀಲಂಕಾದ ತಮಿಳು ಮುಖಂಡರೊಬ್ಬರು ಆಘಾತ ನೀಡಿದ್ದಾರೆ.

ಪ್ರಭಾಕರನ್ ಮೃತಪಟ್ಟಿದ್ದಾನೆ ಎಂದು ಶ್ರೀಲಂಕಾ ಸರ್ಕಾರ ಘೋಷಿಸಿದ ಹದಿನಾಲ್ಕು ವರ್ಷಗಳ ನಂತರ, ತಮಿಳುನಾಡಿನ ಹಿರಿಯ ರಾಜಕಾರಣಿ ಪಜಾ ನೆಡುಮಾರನ್ ಅವರು ಪ್ರಭಾಕರನ್ ಜೀವಂತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಮತ್ತು ಶೀಘ್ರದಲ್ಲೇ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಅನ್ನು ಸ್ಥಾಪಿಸಿದ ಮತ್ತು ದ್ವೀಪ ರಾಷ್ಟ್ರದಲ್ಲಿ ತಮಿಳು ರಾಜ್ಯಕ್ಕಾಗಿ  ಗೆರಿಲ್ಲಾ ಯುದ್ಧದ ನೇತೃತ್ವ ವಹಿಸಿದ್ದ ಪ್ರಭಾಕರನ್, ಮುಲ್ಲಿವೈಕಲ್‌ನಲ್ಲಿ ಶ್ರೀಲಂಕಾ ಸೇನೆಯ ಕಾರ್ಯಾಚರಣೆಯಲ್ಲಿ ಮೇ 18, 2009 ರಂದು ಸತ್ತನೆಂದು ಘೋಷಿಸಲಾಯಿತು.

ಇದೀಗ ವಿಶ್ವ ತಮಿಳರ ಒಕ್ಕೂಟದ ಅಧ್ಯಕ್ಷರಾದ ನೆಡುಮಾರನ್ ಅವರು ತಂಜಾವೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ, “ಎಲ್ಟಿಟಿಇ ಮುಖ್ಯಸ್ಥ ಪ್ರಭಾಕರನ್ ಜೀವಂತವಾಗಿದ್ದಾರೆ ಮತ್ತು ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ತಮಿಳು ಈಳಂಗಾಗಿ ಅವರ ಯೋಜನೆಗಳನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ” ಎಂದು ಹೇಳುವ ಮೂಲಕ ಎಲ್ಲರಿಗೂ ಅಚ್ಚರಿ ನೀಡಿದ್ದಾರೆ.

“ಶ್ರೀಲಂಕಾದಲ್ಲಿ ಸಿಂಹಳೀಯ ದಂಗೆಯ ನಂತರ ರಾಜಪಕ್ಸೆ ಸರ್ಕಾರದ ಪತನವು ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಇದು  ಪ್ರಭಾಕರನ್ ಅವರು ಕಾಣಿಸಿಕೊಳ್ಳಲು ಸರಿಯಾದ ಸಮಯ” ಎಂದು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top