News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

190 ಹಿಂದೂಗಳನ್ನು ಭಾರತಕ್ಕೆ ಪ್ರಯಾಣಿಸದಂತೆ ತಡೆದ ಪಾಕಿಸ್ಥಾನ ಅಧಿಕಾರಿಗಳು

ಇಸ್ಲಾಮಾಬಾದ್‌: ಸಿಂಧ್ ಪ್ರಾಂತ್ಯದಲ್ಲಿ ವಾಸಿಸುತ್ತಿರುವ 190 ಹಿಂದೂಗಳು ಭಾರತಕ್ಕೆ ಪ್ರಯಾಣಿಸದಂತೆ ಪಾಕಿಸ್ಥಾನ ತಡೆ ಹಾಕಿದೆ. ಭಾರತಕ್ಕೆ ಭೇಟಿ ನೀಡುತ್ತಿರುವ ಉದ್ದೇಶದ ಬಗ್ಗೆ ತೃಪ್ತಿಕರವಾದ ಪ್ರತಿಕ್ರಿಯೆಯನ್ನು ನೀಡಲು ವಿಫಲವಾದ ನಂತರ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಸಿಂಧ್‌ನ ಒಳಭಾಗದ ಊರಿನಿಂದ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ವಿವಿಧ ಹಿಂದೂ ಕುಟುಂಬಗಳು ಧಾರ್ಮಿಕ ತೀರ್ಥಯಾತ್ರೆಗಾಗಿ ವೀಸಾದಲ್ಲಿ ಭಾರತಕ್ಕೆ ತೆರಳಲು ಮಂಗಳವಾರ ವಾಘಾ ಗಡಿಯನ್ನು ತಲುಪಿದ್ದವು. ಆದರೆ ಅವರನ್ನು ಮುಂದಕ್ಕೆ ಹೋಗಲು ಅಧಿಕಾರಿಗಳು ಬಿಡಲಿಲ್ಲ ಎಂದು   ವರದಿಗಳು ತಿಳಿಸಿವೆ.

ಆದರೆ, ಪಾಕಿಸ್ತಾನದ ವಲಸೆ ಅಧಿಕಾರಿಗಳು ಹಿಂದೂಗಳನ್ನು ಭಾರತಕ್ಕೆ ತೆರಳಲು ಅನುಮತಿಸಲಿಲ್ಲ. ಭಾರತಕ್ಕೆ ಏಕೆ ಹೋಗಲು ಬಯಸುತ್ತಾರೆ ಎಂಬುದಕ್ಕೆ ಸರಿಯಾದ ಕಾರಣವನ್ನು ಅವರು ನೀಡಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ.

ವರದಿಯ ಪ್ರಕಾರ, ಭಾರತಕ್ಕೆ ಪ್ರಯಾಣಿಸುವ ಹಿಂದೂ ಕುಟುಂಬಗಳು ಸಾಮಾನ್ಯವಾಗಿ ಧಾರ್ಮಿಕ ತೀರ್ಥಯಾತ್ರೆಗಾಗಿ ವೀಸಾಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ನಂತರ ಅವರು ದೀರ್ಘಕಾಲದವರೆಗೆ ಭಾರತದಲ್ಲಿ ಇರುತ್ತಾರೆ.

ಪ್ರಸ್ತುತ, ರಾಜಸ್ಥಾನ ಮತ್ತು ದೆಹಲಿ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಪಾಕಿಸ್ತಾನಿ ಹಿಂದೂಗಳು ಅಲೆಮಾರಿಗಳಾಗಿ ವಾಸಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಪಾಕಿಸ್ತಾನವು ಅಲ್ಪಸಂಖ್ಯಾತ ಹಿಂದೂ ಸಮುದಾಯದ 22,10,566 ಜನರಿಗೆ ನೆಲೆಯಾಗಿದೆ, ಇದು ಅಲ್ಲಿನ ಒಟ್ಟು ನೋಂದಾಯಿತ ಜನಸಂಖ್ಯೆ 18,68,90,601 ರ ಕೇವಲ 1.18 ಪ್ರತಿಶತವಾಗಿದೆ ಎಂದು ಸೆಂಟರ್ ಫಾರ್ ಪೀಸ್ ಅಂಡ್ ಜಸ್ಟಿಸ್ ಪಾಕಿಸ್ತಾನದ ವರದಿ ಹೇಳುತ್ತದೆ.

ಪಾಕಿಸ್ತಾನದಲ್ಲಿ ಹಿಂದೂ ಜನಸಂಖ್ಯೆ ಸೇರಿದಂತೆ ಅಲ್ಪಸಂಖ್ಯಾತರು ಬಡವರಾಗಿದ್ದು, ದೇಶದ ಶಾಸಕಾಂಗ ವ್ಯವಸ್ಥೆಯಲ್ಲಿ ಅತ್ಯಲ್ಪ ಪ್ರಾತಿನಿಧ್ಯವನ್ನು ಹೊಂದಿದ್ದಾರೆ. ಬಹುಸಂಖ್ಯಾತ ಮುಸ್ಲಿಂರಿಂದ ನಿರಂತರ ಧಾರ್ಮಿಕ ದೌರ್ಜನ್ಯಗಳನ್ನು ಇವರು ಎದುರಿಸುತ್ತಲೇ ಬರುತ್ತಿದ್ದಾರೆ. ಹೀಗಾಗಿ ಅವರು ಭಾರತಕ್ಕೆ ವಲಸೆ ಹೋಗುವ ದಾರಿಗಳನ್ನು ಹುಡುಕುತ್ತಿರುತ್ತಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top