News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಮುಂಬೈ ಏರ್‌ಪೋರ್ಟ್‌ ಹಸ್ತಾಂತರಕ್ಕೆ ಒತ್ತಡ ಇರಲಿಲ್ಲʼ: ರಾಹುಲ್‌ಗೆ ಜಿವಿಕೆ ಮುಖ್ಯಸ್ಥ ತಿರುಗೇಟು

ನವದೆಹಲಿ: ಮೋದಿ ಸರ್ಕಾರವು ಮುಂಬೈ ವಿಮಾನ ನಿಲ್ದಾಣವನ್ನು ಜಿವಿಕೆ ಸಂಸ್ಥೆಯಿಂದ ಹೈಜಾಕ್ ಮಾಡಿ ಅದಾನಿ ಗ್ರೂಪ್‌ಗೆ ಹಸ್ತಾಂತರಿಸಿದೆ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಜಿವಿಕೆಯ ಉಪಾಧ್ಯಕ್ಷ ಜಿವಿ ಸಂಜಯ್ ರೆಡ್ಡಿ ಬಲವಾಗಿ ಅಲ್ಲಗಳೆದಿದ್ದಾರೆ.

“ಮುಂಬೈ ವಿಮಾನ ನಿಲ್ದಾಣವನ್ನು ಮಾರಾಟ ಮಾಡಲು ಅದಾನಿ ಸಮೂಹದಿಂದ ಅಥವಾ ಬೇರೆಯವರಿಂದ ಯಾವುದೇ ಒತ್ತಡ ಇರಲಿಲ್ಲ” ಎಂದು ರೆಡ್ಡಿ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ.

ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಜುಲೈ 2021 ರಲ್ಲಿ ಜಿವಿಕೆಯಿಂದ ಮುಂಬೈ ವಿಮಾನ ನಿಲ್ದಾಣವನ್ನು ಸ್ವಾಧೀನಪಡಿಸಿಕೊಂಡಿತು. ಇದಕ್ಕೆ ಯಾರ ಒತ್ತಡವೂ ಇರಲಿಲ್ಲ ಎಂದು ಜಿವಿಕೆ ಮುಖ್ಯಸ್ಥರು ಸ್ಪಷ್ಟವಾಗಿ ತಿಳಿಸುವ ಮೂಲಕ ರಾಹುಲ್‌ ಗಾಂಧಿಗೆ ಟಾಂಗ್‌ ನೀಡಿದ್ದಾರೆ.

“ಮುಂಬೈ ವಿಮಾನ ನಿಲ್ದಾಣದ ನಿರ್ವಹಣೆಯಿಂದ ನಮಗೆ ನಷ್ಟವುಂಟಾಗಿತ್ತು. ಅದಾನಿಗೆ ಹಸ್ತಾಂತರ ನಡೆಸುವ ಒಂದು ವರ್ಷದ ಮೊದಲು ನಾವು ಇದಕ್ಕಾಗಿ ಹೂಡಿಕೆದಾರರನ್ನು ಎದುರು ನೋಡುತ್ತಿದ್ದೆವು. ಮೂವರು ಹೂಡಿಕೆದಾರರು ದೊರೆತರೂ ಅವರ ಷರತ್ತುಗಳನ್ನು ನಮಗೆ ಭರಿಸಲಾಗಲಿಲ್ಲ. ಮೂರು ತಿಂಗಳು ವಿಮಾನ ನಿಲ್ದಾಣದ ವ್ಯವಹಾರ ಮುಚ್ಚಲಾಯಿತು. ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಈ ಸಂಸದರ್ಭದಲ್ಲಿ ಗೌತಮ್‌ ಅದಾನಿ ನಮ್ಮನ್ನು ಸಂಪರ್ಕಿಸಿ ವಿಮಾನ ನಿಲ್ದಾಣದ ಬಗ್ಗೆ ಆಸಕ್ತಿ ಹೊಂದಿರುವುದಾಗಿ ಹೇಳಿದರು. ಒಂದು ತಿಂಗಳಲ್ಲಿ ಎಲ್ಲಾ ವಹಿವಾಟು ಮುಗಿಸುವ ಭರವಸೆ ನೀಡಿದರು. ಇದು ನಮಗೆ ಅತ್ಯಂತ ಮುಖ್ಯವಾಗಿತ್ತು. ನಾವು ಸಾಲ ನೀಡಿದವರಿಗೆ ಮರುಪಾವತಿ ಮಾಡಬೇಕಾಗಿತ್ತು. ಹೀಗೆ ಹಸ್ತಾಂತರ ಪ್ರಕ್ರಿಯೆ ಮುಕ್ತಾಯವಾಯಿತು. ಇದರಲ್ಲಿ ಕೇಂದ್ರ ಅಥವಾ ಕೇಂದ್ರದ ಸಂಸ್ಥೆಗಳಿಂದ ಯಾವುದೇ ಒತ್ತಡವೂ ನಮಗೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಜಯ್‌ ರೆಡ್ಡಿ ಅವರ ಹೇಳಿಕೆ ಸಂಸತ್ತಿನಲ್ಲಿ ರಾಹುಲ್‌ ಗಾಂಧಿ ಮಾಡಿದ ಆರೋಪಗಳಲ್ಲಿ ಹುರುಳಿಲ್ಲ ಎಂಬುದನ್ನು ತೋರಿಸುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top