News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಾಂಗ್ಲಾದೇಶ: 14 ದೇಗುಲಗಳನ್ನು ಧ್ವಂಸ ಮಾಡಿದ ದುಷ್ಕರ್ಮಿಗಳು

ಢಾಕಾ: ಇಸ್ಲಾಮಿಕ್‌ ಮೂಲಭೂತವಾದಿಗಳಿಂದ ತುಂಬಿರುವ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ವಾಯುವ್ಯ ಬಾಂಗ್ಲಾದೇಶದ 14 ಹಿಂದೂ ದೇವಾಲಯಗಳನ್ನು ಅಪರಿಚಿತ ವ್ಯಕ್ತಿಗಳು ರಾತ್ರೋರಾತ್ರಿ ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

“ರಾತ್ರಿ ವೇಳೆ ದಾಳಿ ನಡೆಸಿರುವ ದುಷ್ಕರ್ಮಿಗಳು 14 ದೇವಾಲಯಗಳಲ್ಲಿನ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ. ಕೆಲವು ವಿಗ್ರಹಗಳು ದೇಗುಲದಲ್ಲಿನ ಕೊಳದಲ್ಲಿ ಪತ್ತೆಯಾಗಿದೆ” ಎಂದು ಬಾಂಗ್ಲಾದ ಹಿಂದೂ ಸಮುದಾಯದ ಮುಖಂಡ ಬಿದ್ಯನಾಥ್ ಬರ್ಮನ್ ಹೇಳಿದ್ದಾರೆ.

ಘಟನೆ ಕತ್ತಲೆಯಲ್ಲಿ ಸಂಭವಿಸಿದ ಕಾರಣ ಅಪರಾಧಿಗಳು ಯಾರು ಎಂಬುದು ಪತ್ತೆಯಾಗಿಲ್ಲ, ತನಿಖೆಯ ನಂತರ ಅವರನ್ನು ನ್ಯಾಯಾಂಗದ ಕಟಕಟೆಗೆ ತರುವ ಭರವಸೆ ಇದೆ ಎಂದಿದ್ದಾರೆ.

ಬಾಂಗ್ಲಾದ ಹಿಂದೂ ಸಮುದಾಯದ ಮುಖಂಡ ಮತ್ತು ಒಕ್ಕೂಟ ಪರಿಷತ್ ಅಧ್ಯಕ್ಷ ಸಮರ್ ಚಟರ್ಜಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, “ಈ ಪ್ರದೇಶವು ಯಾವಾಗಲೂ ಅತ್ಯುತ್ತಮ ಸರ್ವಧರ್ಮ ಸಾಮರಸ್ಯದ ಪ್ರದೇಶವೆಂದು ಹೆಸರುವಾಸಿಯಾಗಿದೆ. ಹಿಂದೆ ಇಂತಹ ಹೇಯ ಘಟನೆ ಇಲ್ಲಿ ನಡೆದಿಲ್ಲ. ಮುಸ್ಲಿಂ ಸಮುದಾಯವು ನಮ್ಮೊಂದಿಗೆ ಯಾವುದೇ ವಿವಾದವನ್ನು ಹೊಂದಿಲ್ಲ. ಹೀಗಾಗಿ ಅಪರಾಧಿಗಳು ಯಾರು ಎಂದು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದಿದ್ದಾರೆ.

ಬಲಿಯಡಂಗಿ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಖೈರುಲ್ ಅನಮ್ ಮಾತನಾಡಿ, ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ಜಾವದ ನಡುವೆ ಹಲವು ಗ್ರಾಮಗಳಲ್ಲಿ ದಾಳಿ ನಡೆದಿದೆ ಎಂದಿದ್ದಾರೆ.

“ಇದು ಸ್ಪಷ್ಟವಾಗಿ ದೇಶದ ಶಾಂತಿಯುತ ಪರಿಸ್ಥಿತಿಯನ್ನು ಅಡ್ಡಿಪಡಿಸಲು ನಡೆಸಿದ ಸಂಯೋಜಿತ ದಾಳಿಯಾಗಿದೆ” ಎಂದು ಠಾಕೂರ್‌ಗಾಂವ್‌ನ ಪೊಲೀಸ್ ಮುಖ್ಯಸ್ಥ ಜಹಾಂಗೀರ್ ಹೊಸೈನ್ ದೇವಾಲಯದ ಸ್ಥಳವೊಂದರಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top