News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶ್ರೀ ಕೃಷ್ಣ ಮತ್ತು ಹನುಮಂತ ಜಗತ್ತಿನ ಶ್ರೇಷ್ಠ ರಾಜತಾಂತ್ರಿಕರು: ಜೈಶಂಕರ್

ನವದೆಹಲಿ: ಶ್ರೀ ಕೃಷ್ಣ ಮತ್ತು ಹನುಮಂತ ಜಗತ್ತಿನ ಸರ್ವಶ್ರೇಷ್ಠ ರಾಜತಾಂತ್ರಿಕರು ಎಂದು ವಿದೇಶಾಂಗ ಸಚಿವ ಜೈ ಶಂಕರ್‌ ಅವರು ಹೇಳಿದ್ದಾರೆ.

ಎಸ್ ಜೈಶಂಕರ್ ಅವರು ರಾಜತಾಂತ್ರಿಕತೆಯನ್ನು ವಿವರಿಸುವ ಸಂದರ್ಭದಲ್ಲಿ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣದ ಮಹತ್ವವನ್ನು ಎತ್ತಿ ತೋರಿಸಿದ್ದಾರೆ.

ಪುಣೆಯಲ್ಲಿ ಮರಾಠಿಗೆ ‘ಭಾರತ್ ಮಾರ್ಗ’ ಎಂದು ಅನುವಾದಿಸಲಾಗಿರುವ ತಮ್ಮ ಇಂಗ್ಲಿಷ್ ಪುಸ್ತಕ ‘ದಿ ಇಂಡಿಯಾ ವೇ: ಸ್ಟ್ರಾಟಜೀಸ್ ಫಾರ್ ಆನ್ ಅಸರ್ಟೈನ್ ವರ್ಲ್ಡ್’ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, “ಜಗತ್ತಿನ ಅತಿದೊಡ್ಡ ರಾಜತಾಂತ್ರಿಕರು ಶ್ರೀಕೃಷ್ಣ. ಮತ್ತು ಹನುಮಂತ. ನಾವು ಹನುಮಂತನನ್ನು ಗಮನಿಸಿದರೆ ಅವನು ರಾಜತಾಂತ್ರಿಕತೆಯನ್ನು ಮೀರಿ ತನ್ನ ಗುರಿಯತ್ತ ಸಾಗಿ ಸೀತೆಯನ್ನು ಸಂಪರ್ಕಿಸಿದ ಮತ್ತು ಲಂಕೆಗೆ ಬೆಂಕಿಗ ಹಾಕಿದ” ಎಂದಿದ್ದಾರೆ.

ಶ್ರೀಕೃಷ್ಣನು ಶಿಶುಪಾಲನನ್ನು ಕ್ಷಮಿಸಿದ ಉದಾಹರಣೆಯನ್ನು ನೀಡಿದ ಅವರು, ಶಿಶುಪಾಲನ 100 ತಪ್ಪುಗಳನ್ನು ಕ್ಷಮಿಸುತ್ತೇನೆ ಎಂದು ಕೃಷ್ಣನು ವಾಗ್ದಾನ ಮಾಡಿದ್ದ, ಆದರೆ 100 ನೇ ತಪ್ಪಿನ ಕೊನೆಯಲ್ಲಿ ಅವನನ್ನು ಕೊಂದು ಹಾಕಿದ. ಇದು ಉತ್ತಮ ನಿರ್ಧಾರ ತೆಗೆದುಕೊಳ್ಳುವವರ ಪ್ರಮುಖ ಗುಣಗಳ ಪ್ರಾಮುಖ್ಯತೆಯನ್ನು ತೋರಿಸುತ್ತದೆ ಎಂದಿದ್ದಾರೆ.

ಜೈಶಂಕರ್ ಅವರು ಕೌರವರು ಮತ್ತು ಪಾಂಡವರ ನಡುವೆ ಮಹಾಭಾರತ ಯುದ್ಧ ನಡೆದ ಕುರುಕ್ಷೇತ್ರವನ್ನು “ಬಹುಧ್ರುವ ಭಾರತ” ಎಂದು ಹೋಲಿಸಿದ್ದಾರೆ. ಕಾರ್ಯತಂತ್ರದ ಸ್ವಾಯತ್ತತೆಯು ಇತರ ರಾಜ್ಯಗಳಿಂದ ನಿರ್ಬಂಧಿಸಲ್ಪಡದೆ ತನ್ನದೇ ಆದ ರಾಷ್ಟ್ರೀಯ ಹಿತಾಸಕ್ತಿ ಮತ್ತು ಆದ್ಯತೆಯ ವಿದೇಶಾಂಗ ನೀತಿಯನ್ನು ಅನುಸರಿಸುವ ರಾಜ್ಯದ ಸಾಮರ್ಥ್ಯವನ್ನು ಇದು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top