ಅಹಮದಾಬಾದ್: ಭಾರತದ ಅಗ್ರಗಣ್ಯ ವಾಸ್ತುಶಿಲ್ಪಿ, ಜಾಗತಿಕ ದಂತಕಥೆ ಬಾಲಕೃಷ್ಣ ದೋಶಿ ಅವರು ಅಹಮದಾಬಾದ್ನಲ್ಲಿ ತಮ್ಮ 95ನೇ ವಯಸ್ಸಿನಲ್ಲಿ ಇಂದು ನಿಧನರಾದರು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM) ಬೆಂಗಳೂರು ಮತ್ತು ಗುಜರಾತಿನ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೇಟಿವ್ ಲಿಮಿಟೆಡ್ ಸೇರಿದಂತೆ ದೇಶದ ಪ್ರಸಿದ್ಧ ಕಟ್ಟಡಗಳನ್ನು ವಿನ್ಯಾಸಗೊಳಿಸಿದ ದೋಶಿ ವಾಸ್ತುಶಿಲ್ಪಕ್ಕೆ ಹೆಸರಾದವರು.
ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ದೋಶಿ ಅವರು ಕಳೆದ ವರ್ಷ ಪ್ರಾಚೀನ ವಾಸ್ತುಶಿಲ್ಪಕ್ಕೆ ಬ್ರಿಟಿಷ್ ರಾಜಪ್ರಭುತ್ವವು ವೈಯಕ್ತಿಕವಾಗಿ ನೀಡಿದ ಯುಕೆಯ ಅತ್ಯುನ್ನತ ವಾಸ್ತುಶಿಲ್ಪದ ಗೌರವವಾದ ರಾಯಲ್ ಗೋಲ್ಡ್ ಮೆಡಲ್ 2022ಕ್ಕೆ ಪಾತ್ರರಾಗಿದ್ದರು. ಆರ್ಕಿಟೆಕ್ಚರ್ ಜಗತ್ತಿನಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಎರಡನೇ ಭಾರತೀಯರಾಗಿದ್ದಾರೆ.
ದೋಶಿ 2022 ರ ರಾಯಲ್ ಗೋಲ್ಡ್ ಮೆಡಲ್ ಗೆದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದರು. ವಾಸ್ತುಶಿಲ್ಪದ ಜಗತ್ತಿಗೆ ದೋಶಿ ಅವರ ಕೊಡುಗೆಗಳು ಸ್ಮರಣೀಯ ಎಂದು ಬಣ್ಣಿಸಿದ್ದರು. ಅವರ ಸೃಜನಶೀಲತೆ, ಅನನ್ಯತೆ ಮತ್ತು ವೈವಿಧ್ಯಮಯ ವಿನ್ಯಾಸಕ್ಕಾಗಿ ಅವರ ಕೃತಿಗಳು ಜಾಗತಿಕವಾಗಿ ಮೆಚ್ಚುಗೆ ಪಡೆದಿವೆ ಎಂದಿದ್ದರು.
Dr. BV Doshi Ji was a brilliant architect and a remarkable institution builder. The coming generations will get glimpses of his greatness by admiring his rich work across India. His passing away is saddening. Condolences to his family and admirers. Om Shanti. pic.twitter.com/LLdrZOCcQZ
— Narendra Modi (@narendramodi) January 24, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.