News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2024 ರ ಜನವರಿ 1ಕ್ಕೆ ಅಯೋಧ್ಯಾ ರಾಮಮಂದಿರ ಸಿದ್ಧವಾಗಲಿದೆ: ಅಮಿತ್‌ ಶಾ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರವನ್ನು ಜನವರಿ 1, 2024 ರಂದು ತೆರೆಯಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ತ್ರಿಪುರಾದಲ್ಲಿ ತಿಳಿಸಿದ್ದಾರೆ. ಬಿಜೆಪಿಯ ʼಜನ್‌ ವಿಶ್ವಾಸ್‌ ಯಾತ್ರೆʼಗೆ ಚಾಲನೆ ನೀಡುವ ಸಲುವಾಗಿ ಅವರಿಂದು ತ್ರಿಪುರಾಗೆ ತೆರಳಿದ್ದಾರೆ.

“ಕಾಂಗ್ರೆಸ್ ನ್ಯಾಯಾಲಯದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಯುಂಟು ಮಾಡಿತ್ತು. ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರದ ನಿರ್ಮಾಣವನ್ನು ಪ್ರಾರಂಭಿಸಿದರು” ಎಂದು ಶಾ ಹೇಳಿದ್ದಾರೆ.

ನವೆಂಬರ್‌ನಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂದಿರದ ನಿರ್ಮಾಣವು ಅರ್ಧ ಹಂತವನ್ನು ದಾಟಿದೆ ಮತ್ತು ಈ ವರ್ಷ ಡಿಸೆಂಬರ್‌ಗೆ ಸಿದ್ಧವಾಗಲಿದೆ ಎಂದು ಹೇಳಿದ್ದರು.

ದಶಕಗಳಿಂದ ಕಾನೂನು ವಿವಾದದಲ್ಲಿ ಸಿಲುಕಿದ್ದ ಅಯೋಧ್ಯಾ ವಿವಾದ ಸುಪ್ರೀಂಕೋರ್ಟ್ ಆಗಸ್ಟ್ 2020 ರಲ್ಲಿ ತೀರ್ಪು ನೀಡಿದ ಬಳಿಕ ಮಂದಿರ ನಿರ್ಮಾಣದ ಕಾರ್ಯ ಪೂರ್ಣಗೊಂಡಿತು. ಇದರ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5 ರಂದು ನೆರವೇರಿಸಿದ್ದರು.

ಪೂರ್ಣಗೊಂಡಿರುವ ದೇವಾಲಯವು ನೆಲ ಅಂತಸ್ತಿನಲ್ಲಿ 160 ಅಂಕಣಗಳನ್ನು, ಮೊದಲ ಮಹಡಿಯಲ್ಲಿ 132 ಅಂಕಣಗಳನ್ನು ಮತ್ತು ಎರಡನೇ ಮಹಡಿಯಲ್ಲಿ 74 ಅಂಕಣಗಳನ್ನು ಹೊಂದಿರುತ್ತದೆ. ಇದು ಐದು ಮಂಟಪಗಳನ್ನು ಹೊಂದಲಿದೆ. ಆವರಣದಲ್ಲಿ ಯಾತ್ರಿಕರ ಸೌಕರ್ಯ ಕೇಂದ್ರ, ವಸ್ತುಸಂಗ್ರಹಾಲಯ, ದಾಖಲೆಗಳು, ಸಂಶೋಧನಾ ಕೇಂದ್ರ, ಸಭಾಂಗಣ, ಗೋಶಾಲೆ, ಆಡಳಿತ ಕಟ್ಟಡ ಮತ್ತು ಅರ್ಚಕರಿಗೆ ಕೊಠಡಿಗಳು ಇರುತ್ತವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top