ನವದೆಹಲಿ: 1971ರ ಯುದ್ಧದಲ್ಲಿ ಭಾರತಕ್ಕೆ ಪಾಕಿಸ್ಥಾನದ ಸೇನೆ ಶರಣಾದ ಫೋಟೋವನ್ನು ಹಂಚಿಕೊಂಡು ಅಫ್ಘಾನಿಸ್ಥಾನದ ತಾಲಿಬಾನಿಗಳು ಪಾಕಿಸ್ಥಾನವನ್ನು ವ್ಯಂಗ್ಯವಾಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಅಡಗುತಾಣಗಳ ವಿರುದ್ಧ ಸಂಭಾವ್ಯ ಸೇನಾ ಕಾರ್ಯಾಚರಣೆಯ ಬಗ್ಗೆ ಪಾಕಿಸ್ಥಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ಸುಳಿವು ನೀಡಿದ ನಂತರ ತಾಲಿಬಾನ್ ಸೋಮವಾರ ಪಾಕಿಸ್ತಾನವನ್ನು ಅಪಹಾಸ್ಯ ಮಾಡಿ ಫೋಟೋ ಹಂಚಿಕೊಂಡಿದೆ. ಅಲ್ಲದೇ ಸೂಕ್ತ ಪ್ರತಿಕ್ರಿಯೆಯ ಎಚ್ಚರಿಕೆಯನ್ನು ನೀಡಿದೆ.
ಟ್ವಿಟರ್ನಲ್ಲಿ ತಾಲಿಬಾನ್ ನಾಯಕ ಮತ್ತು ಉಪ ಪ್ರಧಾನಿ ಅಹ್ಮದ್ ಯಾಸಿರ್ ಬಾಂಗ್ಲಾದೇಶ ರಚನೆಗೆ ಕಾರಣವಾದ 1971 ರ ಯುದ್ಧದ ನಂತರ ಇಸ್ಲಾಮಾಬಾದ್ ಭಾರತಕ್ಕೆ ಶರಣಾಗುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾನೆ. ಇದಕ್ಕೆ “ಪಾಕಿಸ್ತಾನವು ಟಿಟಿಪಿ ಮೇಲೆ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದರೆ ಇದೇ ರೀತಿಯ ನಾಚಿಕೆಗೇಡಿನ ಸನ್ನಿವೇಶ ಮರುಕಳಿಸುತ್ತದೆ” ಎಂದು ಒಕ್ಕಣೆ ಬರೆದಿದ್ದಾನೆ.
“ಪಾಕಿಸ್ತಾನದ ಆಂತರಿಕ ಮಂತ್ರಿ! ಅದ್ಭುತ ಸರ್! ಸಿರಿಯಾದಲ್ಲಿರುವ ಕುರ್ದಿಗಳನ್ನು ಗುರಿಯಾಗಿಸಲು ಸಿರಿಯಾ ಅಥವಾ ಪಾಕಿಸ್ತಾನ ಟರ್ಕಿಯಲ್ಲ. ಇದು ಅಫ್ಘಾನಿಸ್ತಾನ, ಹೆಮ್ಮೆಯ ಸಾಮ್ರಾಜ್ಯಗಳ ಸ್ಮಶಾನ. ನಮ್ಮ ಮೇಲೆ ಮಿಲಿಟರಿ ದಾಳಿಯ ಬಗ್ಗೆ ಯೋಚಿಸಬೇಡಿ, ಇಲ್ಲದಿದ್ದರೆ ನಾಚಿಕೆಗೇಡಿನ ಸನ್ನಿವೇಶ ಭಾರತದೊಂದಿಗಿನ ಮಿಲಿಟರಿ ಒಪ್ಪಂದ ಪುನರಾವರ್ತನೆಯಾಗಬಹುದು”ಎಂದು ಯಾಸಿರ್ ಉರ್ದುವಿನಲ್ಲಿ ಬರೆದಿದ್ದಾನೆ.
د پاکستان داخله وزیر ته !
عالي جنابه! افغانستان سوريه او پاکستان ترکیه نده چې کردان په سوریه کې په نښه کړي.
دا افغانستان دى د مغرورو امپراتوريو هديره.
په مونږ دنظامي يرغل سوچ مه کړه کنه دهند سره دکړې نظامي معاهدې د شرم تکرار به وي داخاوره مالک لري هغه چې ستا بادار يې په ګونډو کړ. pic.twitter.com/FFu8DyBgio— Ahmad Yasir (@AhmadYasir711) January 2, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.