News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹೊಸ ವರ್ಷಕ್ಕೆ ಭಾರೀ ಭಕ್ತರ ನಿರೀಕ್ಷೆ: ಕಾಶಿಯಲ್ಲಿ ʼಸ್ಪರ್ಶ ದರ್ಶನʼ ಸ್ಥಗಿತ

ವಾರಣಾಸಿ: ಹೊಸ ವರ್ಷದಂದು ಅಪಾರ ಸಂಖ್ಯೆಯ ಭಕ್ತರು ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡುವ ನಿರೀಕ್ಷೆ ಇರುವ ಕಾರಣ ಜಿಲ್ಲಾಡಳಿತವು ಜನರ ನಿಯಂತ್ರಣಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಕಾಶಿ ವಿಶ್ವನಾಥ ದೇವಾಲಯದ ಆಡಳಿತದೊಂದಿಗೆ ಸೇರಿ ಜಿಲ್ಲಾಡಳಿತವು ಡಿಸೆಂಬರ್ 31 ರಿಂದ ಜನವರಿ 2 ರವರೆಗೆ ‘ಸ್ಪರ್ಶ ದರ್ಶನ’ (ಶಿವಲಿಂಗವನ್ನು ಸ್ಪರ್ಶಿಸುವುದು) ಅನ್ನು ನಿರ್ಬಂಧಿಸಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತರನ್ನು ನಿರ್ವಹಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕಾಶಿ ವಿಶ್ವನಾಥ ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.

ವಾರಣಾಸಿಯ ವಿಭಾಗೀಯ ಆಯುಕ್ತ ಕೌಶಲ್ ರಾಜ್ ಶರ್ಮಾ ಮಾತನಾಡಿ, ಡಿಸೆಂಬರ್ 31 ರಿಂದ ಜನವರಿ 2 ರ ನಡುವೆ ಸ್ಪರ್ಶ ದರ್ಶನವನ್ನು ನಿರ್ಬಂಧಿಸಲಾಗಿದೆ. ಅದಕ್ಕಾಗಿ ಡಿಸೆಂಬರ್ 30 ರಂದು ನಾವು ಪೂರ್ವಾಭ್ಯಾಸವನ್ನು ನಡೆಸುತ್ತೇವೆ ಎಂದಿದ್ದಾರೆ.

ದೇವಾಲಯದ ಆಡಳಿತದ ದಾಖಲೆಗಳ ಪ್ರಕಾರ, ಜನವರಿ 1, 2022 ರಂದು ಸುಮಾರು ಏಳು ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು.

ಆದರೆ,  ಫೇಸ್‌ಲಿಫ್ಟ್‌ನಿಂದಾಗಿ ದೇವಾಲಯದ ವೇಗವಾಗಿ ಬೆಳೆಯುತ್ತಿರುವ ಜನಪ್ರಿಯತೆಯ ಕಾರಣ ಈ ಹೊಸ ವರ್ಷದಂದು ಒಟ್ಟು ಸಂದರ್ಶಕರ ಸಂಖ್ಯೆ 12-ಲಕ್ಷದ ಗಡಿಯನ್ನು ದಾಟುವ ನಿರೀಕ್ಷೆಯಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top