News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಪಿಯ ಪ್ರತಿ ನಗರಗಳಲ್ಲೂ ಸ್ಥಾಪನೆಯಾಗಲಿದೆ ಮೀಸಲು ಫುಡ್‌ ಸ್ಟ್ರೀಟ್‌

ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಪ್ರತಿ ನಗರದಲ್ಲಿ ಮೀಸಲು ಫುಡ್ ಸ್ಟ್ರೀಟ್ ಅನ್ನು ಸ್ಥಾಪಿಸಲು ಯೋಜನೆಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಫುಡ್‌ ಸ್ಟ್ರೀಟ್‌ಗಳಲ್ಲಿ ಜನರು ದೇಶಾದ್ಯಂತದ ಪಾಕಪದ್ಧತಿಗಳನ್ನು ರುಚಿ ನೋಡಬೇಕು ಎಂಬ ಉದ್ದೇಶವನ್ನು ಸರ್ಕಾರ ಹೊಂದಿದೆ

ಯೋಜನೆಯನ್ನು ರೂಪಿಸಲು ವಿವಿಧ ಅಭಿವೃದ್ಧಿ ಪ್ರಾಧಿಕಾರಗಳೊಂದಿಗೆ ಸಮನ್ವಯ ಸಾಧಿಸಲು ಸಂಸ್ಕೃತಿ ಮತ್ತು ವಸತಿ ಇಲಾಖೆಗಳಿಗೆ ಮುಖ್ಯಮಂತ್ರಿ ಯೋಗಿ ಹೇಳಿದ್ದಾರೆ.

ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಮೀಸಲಾದ ಫುಡ್ ಸ್ಟ್ರೀಟ್ ಜನರಿಗೆ ವಿವಿಧ ರಾಜ್ಯಗಳ ಪಾಕಪದ್ಧತಿಯನ್ನು ಪರಿಚಯಿಸುತ್ತದೆ ಮತ್ತು ಅವರು ತಮಿಳುನಾಡು, ಪಂಜಾಬ್, ರಾಜಸ್ಥಾನ ಮತ್ತು ಆಂಧ್ರಪ್ರದೇಶ, ಕೇರಳ, ಉತ್ತರಾಖಂಡದಂತಹ ರಾಜ್ಯಗಳಿಗೆ ಪ್ರವಾಸ ಮಾಡುವಾಗ ಏನನ್ನು ತಿನ್ನಬೇಕು ಎಂಬುದು ಅವರಿಗೆ ತಿಳಿಯುತ್ತದೆ ಎಂದು ಹೇಳಿದ್ದಾರೆ.

 ಆಹಾರ, ಉಡುಗೆ, ಭಾಷೆ ಮತ್ತು ಸಂಸ್ಕೃತಿಯಲ್ಲಿ ಭಾರತದ ವೈವಿಧ್ಯತೆಯೇ ವಿಶೇಷತೆಯಾಗಿದೆ ಎಂದು ಹೇಳಿದ ಅವರು,  ನಮ್ಮಲ್ಲಿ ಪ್ರಾಚೀನ ಕಾಲದಿಂದಲೂ ಸಂಗಮ ಸಂಪ್ರದಾಯವಿದೆ. ಎಲ್ಲಾ ವಿಭಿನ್ನ ಸಂಸ್ಕೃತಿಗಳು ದೇಶದ ಶಕ್ತಿ. ಆದ್ದರಿಂದ, ನಾವು ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಉತ್ತರಾಖಂಡದ ಗರ್ವಾಲ್ ಮತ್ತು ಕುಮಾವೂನ್ ಮತ್ತು ಯುಪಿಯ ಭೋಜ್‌ಪುರಿ, ಅವಧಿ, ಬುಂದೇಲ್‌ಖಂಡಿ ಮತ್ತು ಬ್ರಜ್‌ನಂತಹ ರಾಜ್ಯಗಳೊಳಗಿನ ವಿವಿಧ ಪ್ರದೇಶಗಳ ತಿನಿಸುಗಳನ್ನು ಜನರಿಗೆ ಲಭ್ಯವಾಗುವಂತಹ ಮೀಸಲಾದ ಫುಡ್‌ ಸ್ಟ್ರೀಟ್‌ಗಳನ್ನು ಹೊಂದಿರಬೇಕು ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top