News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಈ ಬಜೆಟ್‌ ಮುಂದಿನ 25 ವರ್ಷಕ್ಕೆ ಭಾರತವನ್ನು ಸಿದ್ಧಪಡಿಸಲಿದೆ: ಸೀತಾರಾಮನ್

ನವದೆಹಲಿ: ಮುಂಬರುವ ಕೇಂದ್ರ ಬಜೆಟ್ ಮುಂದಿನ 25 ವರ್ಷಗಳವರೆಗೆ ಭಾರತವನ್ನು ಸಿದ್ಧಪಡಿಸಲು ದೃಷ್ಟಿಕೋನ ಹೊಂದಿರಲಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಂಬರುವ ಬಜೆಟ್ ಹಿಂದಿನ ಬಜೆಟ್‌ಗಳ ಸ್ಪೂರ್ತಿಯನ್ನು ಅನುಸರಿಸುತ್ತದೆ ಎಂದಿದ್ದಾರೆ.

ಪಶ್ಚಿಮದಲ್ಲಿ ಆರ್ಥಿಕ ಹಿಂಜರಿತದ ಭಯದ ನಡುವೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯವಹಾರಗಳು ಭಾರತವನ್ನು ಉತ್ಪಾದನಾ ಅಥವಾ ಸೋರ್ಸಿಂಗ್ ಕೇಂದ್ರವಾಗಿ ಹೇಗೆ ನೋಡಬಹುದು ಎಂಬುದರ ಕುರಿತು ಕಾರ್ಯತಂತ್ರಗಳನ್ನು ರೂಪಿಸುವಂತೆ ಸೀತಾರಾಮನ್ ಉದ್ಯಮಕ್ಕೆ ಕರೆ ನೀಡಿದ್ದಾರೆ.

ಭಾರತಕ್ಕೆ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಸರ್ಕಾರವು ಸಾಕಷ್ಟು ಸೌಲಭ್ಯಗಳನ್ನು ಮತ್ತು ನಿಯಮಗಳನ್ನು ರೂಪಿಸಿದೆ ಮತ್ತು ದೇಶದಲ್ಲಿ ಬೆಳೆಯಲು ಬಯಸುವ ಕೈಗಾರಿಕೆಗಳೊಂದಿಗೆ ತೊಡಗಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಉದ್ಯಮವು ಯುರೋಪ್ ಸೇರಿದಂತೆ ಮುಂದುವರಿದ ರಾಷ್ಟ್ರಗಳಲ್ಲಿನ ಸಂಸ್ಥೆಗಳನ್ನು ಆಕರ್ಷಿಸಲು ಕಾರ್ಯತಂತ್ರವನ್ನು ರೂಪಿಸಬೇಕಾಗಿದೆ, ಇದರಿಂದ ಚೀನಾದಿಂದ ತಮ್ಮ ಉತ್ಪಾದನಾ ನೆಲೆಯನ್ನು ಸ್ಥಳಾಂತರಿಸಲು ಬಯಸುವ ಸಂಸ್ಥೆಗಳನ್ನು ಭಾರತಕ್ಕೆ ಕರೆ ತರಬಹುದು ಎಂದಿದ್ದಾರೆ.

ಯುರೋಪ್‌ನಂತಹ ದೊಡ್ಡ ಮಾರುಕಟ್ಟೆಯಲ್ಲಿ ದೀರ್ಘಾವಧಿಯ ಹಿಂಜರಿತದ ಬಗ್ಗೆ ಎಚ್ಚರಿಕೆ ನೀಡಿದ ಅವರು,  ದೇಶೀಯ ಉದ್ಯಮಗಳು ಎಚ್ಚರಬಹಿಸುವಂತೆ ಕರೆ ನೀಡಿದ್ದಾರೆ.

ಜಿ20 ಗುಂಪಿನ ಭಾರತದ ಅಧ್ಯಕ್ಷತೆಯಲ್ಲಿ ಭಾರತವನ್ನು ಆಕರ್ಷಕ ಹೂಡಿಕೆಯ ತಾಣವಾಗಿ ಸರ್ಕಾರ ಪ್ರದರ್ಶಿಸಲಿದೆ ಎಂದು ಸೀತಾರಾಮನ್‌ ಹೇಳಿದ್ದಾರೆ.

ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿ ಉಳಿದಿದೆ, ವಿದೇಶಿ ಹೂಡಿಕೆದಾರರು ಅದರ ಬೆಳವಣಿಗೆಯ  ಲಾಭವನ್ನು ಪಡೆಯಬಹುದು ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top