ನವದೆಹಲಿ: ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ಸಮಾರೋಪ ಸಮಾರಂಭದಲ್ಲಿ ದಿ ಕಾಶ್ಮೀರ್ ಫೈಲ್ಸ್ ಅನ್ನು ‘ಅಸಭ್ಯ ಮತ್ತು ಪ್ರಚಾರ’ ಎಂದು ಕರೆದ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ ಅವರ ಹೇಳಿಕೆಯು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಭಾರಿ ಪ್ರತಿಭಟನೆಯನ್ನು ಹುಟ್ಟುಹಾಕಿದೆ ಮತ್ತು ಅವರ ಹೇಳಿಕೆಗಳನ್ನು ಅನೇಕರು ಅನಗತ್ಯ ಮತ್ತು ಖಂಡನೀಯ ಎಂದು ಕರೆದಿದ್ದಾರೆ.
ವರದಿಗಳ ಪ್ರಕಾರ ನೂರಾರು ಕಾಶ್ಮೀರಿ ಪಂಡಿತರು ಬೀದಿಗಿಳಿದು ಲ್ಯಾಪಿಡ್ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಅತ್ಯಂತ ಮೆಚ್ಚುಗೆ ಪಡೆದ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ಅಸಭ್ಯ ಮತ್ತು ಪ್ರಚಾರದ ಚಲನಚಿತ್ರ ಎಂಬ ಅವರ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ಸರ್ಕಾರ ಕೂಡಲೇ ಲ್ಯಾಪಿಡ್ ಅವರನ್ನು ಇಸ್ರೇಲ್ಗೆ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ವಿವೇಕ್ ಅಗ್ನಿಹೋತ್ರಿಯವರ ಚಲನಚಿತ್ರವನ್ನು ಭಾರತದ ‘ಶಿಂಡ್ಲರ್ಸ್ ಲಿಸ್ಟ್’ ಎಂದು ಕರೆದ ಕಾಶ್ಮೀರಿ ಪಂಡಿತರು ಲ್ಯಾಪಿಡ್ ನಿಜವಾಗಿಯೂ ಯಹೂದಿಯೇ ಎಂದು ಪ್ರಶ್ನಿಸಿದ್ದಾರೆ.
ಲ್ಯಾಪಿಡ್ ಅವರನ್ನು ಖಂಡಿಸಿದ ಕಾಶ್ಮೀರಿ ಪಂಡಿತ ಯೋಗೇಶ್ ಪಂಡಿತ್ ಅವರು, “ಕಾಶ್ಮೀರ್ ಫೈಲ್ಸ್ ಕೇವಲ 5% ಸನ್ನಿವೇಶವನ್ನು ತೋರಿಸಿದೆ, 95% ಏನಾಯಿತು ಎಂಬುದನ್ನು ಸಿನಿಮಾ ತೋರಿಸಿಲ್ಲ” ಎಂದಿದ್ದಾರೆ.
Kashmiri Pandits in Jammu condemn IFFI Jury Head Nadav Lapid's remark on #KashmirFiles
Yogesh Pandita says, "Kashmir Files was 5%, they didn't see 95% of what happened. We welcome Israel Amb's statement condemning it"
Ranjan says, "Condemnable. He rubbed salt into our wounds." pic.twitter.com/WzgKDSAHWr
— ANI (@ANI) November 30, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.