ಬೆಂಗಳೂರು: ಮಂಗಳೂರು ಆಟೋ ರಿಕ್ಷಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಶಾರೀಕ್ ತನ್ನ ಮೂಲ ಗುರುತನ್ನು ಮರೆಮಾಚಲು ತನ್ನನ್ನ ಹಿಂದೂ ಎಂದು ಬಿಂಬಿಸಿದ್ದಾನೆ. ಮೂಲಗಳ ಪ್ರಕಾರ, ಆರೋಪಿಯು ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್ನ ಚಿತ್ರವನ್ನು ತನ್ನ ವಾಟ್ಸಾಪ್ ಡಿಪಿಯಾಗಿ ಬಳಸಿಕೊಂಡಿದ್ದಾನೆ. ಕೋಮುಗಲಭೆ ಸೃಷ್ಟಿಸುವ ಉದ್ದೇಶದಿಂದ ಅವನು ಹಿಂದೂ ಎಂದು ಪೋಸ್ ಕೊಟ್ಟು ಬಾಂಬ್ಗಳನ್ನು ಸ್ಫೋಟಿಸಲು ಯತ್ನಿಸಿದ್ದಾನೆ ಎಂದು ವರದಿಗಳು ಹೇಳಿವೆ.
ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, “ಅವನು ಹಿಂದೂ ಹೆಸರು, ಗುರುತು ಮತ್ತು ದಾಖಲೆಗಳನ್ನು ಬಳಸುತ್ತಿದ್ದ. ಈ ಮೂಲಕ ಜನರ ದಾರಿ ತಪ್ಪಿಸಿ ಅವರಿಂದ ಸಹಾಯ ಪಡೆಯುತ್ತಿದ್ದ. ಸೋಮವಾರ ತೀರ್ಥಹಳ್ಳಿಯ ಅವನ ಎಲ್ಲಾ ಸಂಬಂಧಿಕರು ಅವನನ್ನು ಗುರುತಿಸಿದ್ದಾರೆ. ಅವನು ಶಾರೀಕ್ ಎಂಬುದು ದೃಢಪಟ್ಟಿದೆ. ಪ್ರಕರಣ ಪೊಲೀಸರು ಕೇಂದ್ರೀಯ ಸಂಸ್ಥೆಗಳೊಂದಿಗೆ ತಮ್ಮ ತನಿಖೆಯನ್ನು ತೀವ್ರಗೊಳಿಸುತ್ತಿದ್ದಾರೆ” ಎಂದಿದ್ದಾರೆ.
” ಶಿವಮೊಗ್ಗದಲ್ಲಿರುವ ಈತನ ಸಂಬಂಧಿಕರ ನಿವಾಸ ಸೇರಿದಂತೆ ಕೆಲವೆಡೆ ಪೊಲೀಸರು ದಾಳಿ ನಡೆಸಿದ್ದು, ಆರೋಪಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ” ಎಂದಿದ್ದಾರೆ.
ಶನಿವಾರ ಪೊಲೀಸ್ ಆಟೋ ರಿಕ್ಷಾದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಪ್ರಯಾಣಿಕನಾಗಿದ್ದ ಶಾರೀಕ್ ಮತ್ತು ಚಾಲಕ ಪುರಷೋತ್ತಮ ಪೂಜಾರಿ ಗಾಯಗೊಂಡಿದ್ದಾರೆ. ಡಿಟೋನೇಟರ್, ವೈರ್ಗಳು ಮತ್ತು ಬ್ಯಾಟರಿಗಳನ್ನು ಅಳವಡಿಸಲಾಗಿರುವ ಕುಕ್ಕರ್ ಸ್ಪೋಟವಾಗಿದ್ದು ದೃಢಪಟ್ಟಿದೆ. ನಂತರ ಪೊಲೀಸರು ಕುಕ್ಕರ್ನೊಂದಿಗೆ ಶಾರೀಕ್ನ ಫೋಟೋವನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಗುರುತನ್ನು ಖಚಿತಪಡಿಸಲು ಅಧಿಕಾರಿಗಳು ಅವನ ಸಂಬಂಧಿಕರನ್ನು ಸಂಪರ್ಕಿಸಿದ್ದಾರೆ. ಆರೋಪಿ ಕುಟುಂಬ ಸದಸ್ಯರು ಸೋಮವಾರ ಫಾದರ್ ಮುಲ್ಲರ್ ಆಸ್ಪತ್ರೆಗೆ ಆಗಮಿಸಿ ಶಾರೀಕ್ ಗುರುತನ್ನು ದೃಢಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.