ವಾರಣಾಸಿ: ತಮಿಳುನಾಡಿನ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಸಾಂಸ್ಕೃತಿಕ ಕಲಾವಿದರು, ಶಿಕ್ಷಣ ತಜ್ಞರು, ಸಾಹಿತಿಗಳು, ಇತಿಹಾಸಕಾರರು, ಇತ್ಯಾದಿಗಳನ್ನು ಒಳಗೊಂಡ ತಮಿಳು ನಿಯೋಗದ ಎರಡನೇ ಬ್ಯಾಚ್ ಇಂದು ಬೆಳಿಗ್ಗೆ ‘ಕಾಶಿ ತಮಿಳು ಸಂಗಮಂ’ನಲ್ಲಿ ಪಾಲ್ಗೊಳ್ಳಲು ಪವಿತ್ರ ನಗರ ಕಾಶಿಯನ್ನು ತಲುಪಿದೆ.
ವಾರಣಾಸಿ ಕ್ಯಾಂಟ್ ರೈಲು ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಕಾಶಿಯಲ್ಲಿ ಉತ್ಸವದಲ್ಲಿ ಪಾಲ್ಗೊಂಡ ನಂತರ ಅವರು ಪ್ರಯಾಗರಾಜ್ ಮತ್ತು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.
ತಮಿಳುನಾಡಿನ ವಿವಿಧ ಭಾಗಗಳಿಂದ ಇನ್ನಷ್ಟು ಪ್ರತಿನಿಧಿಗಳು ತಿಂಗಳ ಕಾಲ ನಡೆಯುವ ‘ಕಾಶಿ ತಮಿಳು ಸಂಗಮಂ’ನಲ್ಲಿ ಭಾಗವಹಿಸಲು ವಿವಿಧ ಬ್ಯಾಚ್ಗಳಲ್ಲಿ ಕಾಶಿಯನ್ನು ತಲುಪುತ್ತಾರೆ.
ಸರ್ಕಾರದ ಪ್ರಕಟಣೆಯ ಪ್ರಕಾರ, ಇದು ಜನರಿಂದ-ಜನರಿಗೆ ವಿನಿಮಯ ಕಾರ್ಯಕ್ರಮವಾಗಿದ್ದು, ಇದರ ಪ್ರಮುಖ ಉದ್ದೇಶವೆಂದರೆ ಈ ಎರಡು ಜ್ಞಾನ ಮತ್ತು ಸಂಸ್ಕೃತಿಯ ಸಂಪ್ರದಾಯಗಳನ್ನು ಹತ್ತಿರ ತರುವುದು, ಹಂಚಿಕೊಂಡ ಪರಂಪರೆಯ ತಿಳುವಳಿಕೆಯನ್ನು ನಿರ್ಮಿಸುವುದು ಮತ್ತು ಈ ಎರಡು ಪ್ರದೇಶಗಳ ಜನರ ನಡುವೆ ಸಂಬಂಧಗಳನ್ನು ಬಲಪಡಿಸುವುದು.
ತಮಿಳುನಾಡಿನ ನಿಯೋಗಕ್ಕೆ ಪ್ರಾಚೀನ ನಗರವಾದ ಕಾಶಿಯ ಐತಿಹಾಸಿಕ ಮಹತ್ವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ.
ಒಂದು ತಿಂಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ತಮಿಳುನಾಡಿನ ವಿವಿಧ ಸಾಂಸ್ಕೃತಿಕ ತಂಡಗಳು ಕಾಶಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.
‘ಕಾಶಿ ತಮಿಳು ಸಂಗಮಂ’ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 19 ರಂದು ಉದ್ಘಾಟಿಸಿದರು.
ತಮಿಳುನಾಡಿನ ನಿಯೋಗದ ಹೊರತಾಗಿ, ಕಾಶಿಯ ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ತಿಂಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.