ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಭೂಭಾಗಕ್ಕೆ ಒಳ ನುಸುಳಲು ಪ್ರಯತ್ನಿಸಿದ ಪಾಕಿಸ್ಥಾನಿಯನ್ನು ಬಿಎಸ್ಎಫ್ ಇಂದು ಗುಂಡು ಹಾರಿಸಿ ಹತ್ಯೆ ಮಾಡಿದೆ. ಮತ್ತೊಬ್ಬನನ್ನು ಬಂಧನಕ್ಕೆ ಒಳಪಡಿಸಿದೆ.
ಬಿಎಸ್ಎಫ್ ಪ್ರತ್ಯೇಕ ಪ್ರಯತ್ನಗಳನ್ನು ವಿಫಲಗೊಳಿಸಿ ಒಳನುಸುಳಿದ ಒರ್ವ ಪಾಕಿಸ್ಥಾನಿಯನ್ನು ಸಂಹಿರಿಸಿದೆ. ಇನ್ನೊಬ್ಬನನ್ನು ಬಂಧಿಸಿದೆ ಎಂದು ಗಡಿ ಕಾವಲು ಪಡೆಯ ವಕ್ತಾರರು ತಿಳಿಸಿದ್ದಾರೆ.
ಜಮ್ಮುವಿನ ಅರ್ನಿಯಾ ಸೆಕ್ಟರ್ ಮತ್ತು ಸಾಂಬಾ ಜಿಲ್ಲೆಯ ರಾಮಗಢ ಸೆಕ್ಟರ್ನಲ್ಲಿ ಮುಂಜಾನೆ ಒಳನುಸುಳುವಿಕೆ ಯತ್ನಗಳನ್ನು ಕಣ್ಗಾವಲು ಪಡೆಗಳು ತಡೆದವು ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ವಕ್ತಾರರು ತಿಳಿಸಿದ್ದಾರೆ.
ವಿವರಗಳನ್ನು ನೀಡಿದ ಅವರು, ಅರ್ನಿಯಾ ಸೆಕ್ಟರ್ನಲ್ಲಿನ ಗಡಿ ಬೇಲಿಯತ್ತ ನುಸುಳುಕೋರ ಸಮೀಪಿಸುತ್ತಿರುವುದನ್ನು ಗಮನಿಸಿದಾಗ ಬಿಎಸ್ಎಫ್ ಪಡೆಗಳು ಗುಂಡಿನ ದಾಳಿ ನಡೆಸಿದವು ಎಂದು ಹೇಳಿದ್ದಾರೆ.
“ಪಡೆಗಳು ಮೊದಲು ಅವರಿಗೆ ನಿಲ್ಲುವಂತೆ ಸೂಚನೆ ನೀಡಿದ್ದವು ಆದರೆ ಅವರು ಯಾವುದೇ ಗಮನ ಕೊಡಲಿಲ್ಲ. ಬೇರೆ ದಾರಿ ಕಾಣದೆ ಸೈನಿಕರು ಗುಂಡು ಹಾರಿಸಿ ಸಂಹರಿಸಿದರು” ಎಂದು ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ, ರಾಮ್ಗಢ್ ಸೆಕ್ಟರ್ನಲ್ಲಿ ಗಡಿ ದಾಟಿದ ನಂತರ ಬೇಲಿಯತ್ತ ಬಂದ ಪಾಕಿಸ್ತಾನಿ ಒಳನುಸುಳುಕೋರನನ್ನು ಪಡೆಗಳು ಬಂಧಿಸಿವೆ ಎಂದು ವಕ್ತಾರರು ತಿಳಿಸಿದ್ದಾರೆ.
” ಅವನನ್ನು ಭಾರತದ ಭಾಗಕ್ಕೆ ಕರೆತರಲಾಗಿದೆ. ಆತನ ವಶದಿಂದ ಇಲ್ಲಿಯವರೆಗೆ ಅಕ್ರಮ ವಸ್ತುಗಳು ಏನೂ ಕಂಡುಬಂದಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.