ಉಜಿರೆ: ಧರ್ಮಸ್ಥಳದಲ್ಲಿ ಪೌಢಶಾಲಾ ವಠಾರದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಶುಭ ಹಾರೈಸಿದರು. ಸಿರಿ ಮಳಿಗೆಯನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮೊಮ್ಮಗಳು ಕುಮಾರಿ ಮಾನ್ಯ ಉದ್ಘಾಟಿಸಿದರು.
ಬಿದಿರಿನ ತುಂಡಿಗೆ ಬಟ್ಟೆ ಸುತ್ತಿದ ದೀಪ (ತುಳು: ಕೊಳ್ತುರಿ) ಹಚ್ಚುವ ಮೂಲಕ ಹಾಗೂ ಬಿದಿರಿನಿಂದ ಮಾಡಿದ ಸರಂಗೋಲು (ತುಳು: ತಡಮೆ) ಸರಿಸುವ ಮೂಲಕ ತುಳುನಾಡಿನ ಶೈಲಿಯಲ್ಲಿ ವಸ್ತುಪ್ರದರ್ಶನ ಉದ್ಘಾಟಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಯೋಗಗಳು ಹಾಗೂ ಆದ ಪರಿವರ್ತನೆ, ವಿವಿಧ ಮಳಿಗೆಗಳು, ಕೃಷಿ, ವಾಣಿಜ್ಯ, ಬ್ಯಾಂಕ್ಗಳು, ವ್ಯಾಪಾರಿ ಮಳಿಗೆಗಳಿದ್ದು ಎಲ್ಲರೂ ಕುಟುಂಬ ಸಮೇತರಾಗಿ ಲಕ್ಷದೀಪೋತ್ಸವಕ್ಕೆ ಬಂದು ಮಾಹಿತಿ, ಮನೋರಂಜನೆ ಹಾಗೂ ವಿಶೇಷ ಜ್ಞಾನಸಂಗ್ರಹ ಮಾಡಿಕೊಳ್ಳಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು. ಲಕ್ಷದೀಪೋತ್ಸವದಿಂದ ಬದುಕಿನಲ್ಲಿ ಹೊಸಬೆಳಕಿನೊಂದಿಗೆ ನವ ಚೈತನ್ಯ, ಉತ್ಸಾಹ ಮೂಡಿ ಬರಲಿ ಎಂದು ಅವರು ಹಾರೈಸಿದರು.
ಸಿರಿ ಮಳಿಗೆ ಉದ್ಘಾಟನೆ: ಅಮೃತವರ್ಷೀಣಿ ಸಭಾ ಭವನದ ಬಳಿ ಸಿರಿ ಮಳಿಗೆಯನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮೊಮ್ಮಗಳು ಕುಮಾರಿ ಮಾನ್ಯ ಉದ್ಘಾಟಿಸಿದರು.
ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸಿರಿ ಸಂಸ್ಥೆ ಪ್ರೇರಕವಾಗಿದ್ದು ಮಹಿಳೆಯರೆ ತಯಾರಿಸಿದ ಉತ್ಪನ್ನಗಳನ್ನು ಸಿರಿಯಲ್ಲಿ ಮಾರಾಟ ಮಾಡುತ್ತಿದ್ದು ರಾಜ್ಯದಲ್ಲಿ 13 ಕಡೆ ಮಾರಾಟ ಮಳಿಗೆಗಳಿದ್ದು ಇದು 14 ನೆ ಮಳಿಗೆಯಾಗಿದೆ. ಗ್ರಾಹಕರು ’ಸಿರಿ’ ಉತ್ಪನ್ನಗಳನ್ನು ಖರೀದಿಸಿ ಸಹಕರಿಸುವಂತೆ ಹೆಗ್ಗಡೆಯವರು ಕೋರಿದರು.
ಹೆಗ್ಗಡೆಯವರ ಮೊಮ್ಮಗಳು ಕುಮಾರಿ ಮಾನ್ಯ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಸಿ.ಇ.ಒ. ಅನಿಲ್ ಕುಮಾರ್, ’ಸಿರಿ’ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ್ ಮೊದಲಾದವರು ಉಪಸ್ಥಿತರಿದ್ದರು.
ವಸ್ತುಪ್ರದರ್ಶನ ಇದೇ 24 ರ ವರೆಗೆ ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ ಹತ್ತು ಗಂಟೆವರೆಗೆ ತೆರೆದಿದ್ದು ಉಚಿತ ಪ್ರವೇಶಾವಕಾಶವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.