ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸ್ಟ್ರಾಬೆರಿ ಕೃಷಿಯು ರೈತರಿಗೆ ಉತ್ತಮ ಲಾಭವನ್ನು ನೀಡುತ್ತಿದ್ದು, ಹೆಚ್ಚು ಹೆಚ್ಚು ರೈತರು ಇದರತ್ತ ಆಕರ್ಷಿತರಾಗುತ್ತಿದ್ದಾರೆ. ಸ್ಟ್ರಾಬೆರಿ ಕೃಷಿಯು ಜಮ್ಮು ಮತ್ತು ಕಾಶ್ಮೀರದ ಯುವಕರಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಕೂಡ ಒದಗಿಸುತ್ತಿದೆ.
ಕಾಶ್ಮೀರದ ಯುವ ರೈತರನ್ನು ಕೃಷಿ ವ್ಯವಹಾರದತ್ತ ಆಕರ್ಷಿಸುವ ಪ್ರಯತ್ನದಲ್ಲಿ ಕೇಂದ್ರ ಮತ್ತು ಜಮ್ಮು- ಕಾಶ್ಮೀರ ಸರ್ಕಾರಗಳು ಸಾಲ ಮತ್ತು ತಾಂತ್ರಿಕ ಬೆಂಬಲವನ್ನು ನೀಡುತ್ತಿವೆ.
ವರದಿಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿನ ಅನುಕೂಲಕರ ಹವಾಮಾನ ಪರಿಸ್ಥಿತಿಗಳು ಸ್ಟ್ರಾಬೆರಿ ಕೃಷಿಗೆ ಪೂರಕವಾಗಿದ್ದು, ಇದನ್ನು ವ್ಯಾಪಾರವಾಗಿ ತೆಗೆದುಕೊಳ್ಳಲು ಯುವಜನರಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸಿದೆ.
ಶ್ರೀನಗರ ನಗರದ ಹೊರವಲಯದಲ್ಲಿರುವ ಗಸ್ಸು ಬಟ್ಪೋರಾ ಗ್ರಾಮದ ರೈತರು ಭರ್ಜರಿ ಸ್ಟ್ರಾಬೆರಿ ಕಟಾವಿನಿಂದ ಸಂತಸಗೊಂಡಿದ್ದಾರೆ. ಸ್ಟ್ರಾಬೆರಿಗಳನ್ನು ಬೆಳೆಯುವ ಅತಿ ಹೆಚ್ಚು ಜನರನ್ನು ಹೊಂದಿರುವ ಗಸ್ಸುವನ್ನು ‘ಸ್ಟ್ರಾಬೆರಿ ವಿಲೇಜ್’ ಎಂದು ಕರೆಯಲಾಗುತ್ತದೆ.
ರೈತರು ಪ್ರತಿ ವರ್ಷ ನೂರಾರು ಎಕರೆ ಭೂಮಿಯಲ್ಲಿ ಟನ್ಗಟ್ಟಲೆ ವಿದೇಶಿ ಬೆರಿಗಳನ್ನು ಬೆಳೆಯುತ್ತಾರೆ. ಇದು ಇಡೀ ಕಾಶ್ಮೀರ ಕಣಿವೆಯಲ್ಲಿ ಸ್ಟ್ರಾಬೆರಿಗಳನ್ನು ಉತ್ಪಾದಿಸುವ ಮೊದಲನೆಯ ಪ್ರದೇಶದ. ಈ ಗ್ರಾಮದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಹ ಸ್ಟ್ರಾಬೆರಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ, ಸ್ಟ್ರಾಬೆರಿ ಕಾಶ್ಮೀರ ಕಣಿವೆಯಲ್ಲಿ ಬಂಪರ್ ಹಣ ನೀಡುವ ಬೆಳೆಯಾಗಿ ಹೊರಹೊಮ್ಮಿದೆ ಮತ್ತು ಅನೇಕ ತರಕಾರಿ ರೈತರು ಸ್ಟ್ರಾಬೆರಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸ್ಟ್ರಾಬೆರಿಗಳಲ್ಲದೆ, ಕಾಶ್ಮೀರಿ ಹಣ್ಣುಗಳಾದ ಸೇಬು, ಚೆರ್ರಿ, ದ್ರಾಕ್ಷಿ, ಏಪ್ರಿಕಾಟ್ ಮತ್ತು ಪ್ಲಮ್ ಕೂಡ ತಮ್ಮ ಗುಣಮಟ್ಟ ಮತ್ತು ರುಚಿಗೆ ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿವೆ ಮತ್ತು ಜಮ್ಮು-ಕಾಶ್ಮೀರದ ರೈತರಿಗೆ ಉತ್ತಮ ಆದಾಯವನ್ನು ತರುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.