ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಮತ್ತೊಮ್ಮೆ ಕಿಡಿಕಾರಿದ್ದಾರೆ. ವಿಶ್ವವಿದ್ಯಾಲಯಗಳು ಪಕ್ಷದ ಕೇಡರ್ಗಳಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ್ದಾರೆ.
“ಕೇರಳದಲ್ಲಿ 13 ವಿಶ್ವವಿದ್ಯಾಲಯಗಳಿದ್ದು, ಇಲ್ಲಿನ ಎಲ್ಲಾ ನೇಮಕಾತಿಗಳು ಕಾನೂನುಬಾಹಿರವಾಗಿವೆ. 100 ಪ್ರತಿಶತದಷ್ಟು ನೇಮಕಾತಿಗಳು ಕಾನೂನು ಉಲ್ಲಂಘಿಸಿ ನಡೆದಿರುವ ಬೇರೆ ಯಾವುದಾದರೂ ರಾಜ್ಯವಿದೆಯೇ? ವಿಶ್ವವಿದ್ಯಾಲಯಗಳು ಪಕ್ಷದ ಕೇಡರ್ ಆಗಿವೆ. ಕೇಡರ್ಗಳು ಮತ್ತು ಅವರ ಸಂಬಂಧಿಕರು ಇಲ್ಲಿ ರಾಜ್ಯಭಾರ ಮಾಡುತ್ತಿದ್ದಾರೆ” ಎಂದು ಗವರ್ನರ್ ಆರೋಪಿಸಿದ್ದಾರೆ.
“ವಿಶ್ವವಿದ್ಯಾನಿಲಯಗಳನ್ನು ನಡೆಸುವ ಕೆಲಸ ಕುಲಪತಿಯವರದ್ದು, ಸರ್ಕಾರವನ್ನು ನಡೆಸುವುದು ಚುನಾಯಿತ ಸರ್ಕಾರದ ಕೆಲಸ. ನಾನು ಸರ್ಕಾರದ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದ ಒಂದು ಉದಾಹರಣೆ ನೀಡಿ, ಆ ಕ್ಷಣವೇ ರಾಜೀನಾಮೆ ನೀಡುತ್ತೇನೆ. ಅವರು ಪ್ರತಿದಿನ ವಿಶ್ವವಿದ್ಯಾನಿಲಯಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಿದ 1,001 ಉದಾಹರಣೆಗಳನ್ನು ನಾನು ನಿಮಗೆ ನೀಡಬಲ್ಲೆ” ಎಂದು ಅವರು ಹೇಳಿದ್ದಾರೆ.
ಈ ಹಿಂದೆ, ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರವು ರಾಜ್ಯಪಾಲ ಆರಿಫ್ ಖಾನ್ ಅವರನ್ನು ಕುಲಪತಿ ಹುದ್ದೆಯಿಂದ ಪದಚ್ಯುತಿ ಮಾಡಲು ರಾಜಭವನಕ್ಕೆ ಸುಗ್ರೀವಾಜ್ಞೆಯನ್ನು ಕಳುಹಿಸಿದೆ. ಇದನ್ನು ಕೇರಳ ರಾಜಭವನ ದೃಢಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.