ಬೆಂಗಳೂರು: ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದ ದಂಪತಿಗಳು ಸೀಮಂತ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ನವೆಂಬರ್ 1ರಂದು ನಡೆದ ಸೀಮಂತ ಕಾರ್ಯದಲ್ಲಿ ಬಂದಂತಹ ಅತಿಥಿಗಳನ್ನು ಒಳಗೊಂಡಂತೆ ದಂಪತಿಗಳಾದ ಬಸವರಾಜ ಮತ್ತು ಅವರ ಪತ್ನಿಯಾದ ಶಾಂತಾ ಜಿಗೇರಿ ಎಲ್ಲರೂ ಸೇರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ಕನ್ನಡ ಪರವಾದ ಫಲಕಗಳನ್ನು ಹಿಡಿದುಕೊಂಡು ಕನ್ನಡ ಪ್ರೇಮ ಮೆರೆದರು.
ಕನ್ನಡ ಎನ್ನುವುದು ಕೇವಲ ಮಾತಿಗೆ, ಗೀತೆಗೆ, ಸಿಳ್ಳು- ಕೇಕೆಗೆ, ಬರಹ – ಭಾಷಣಕ್ಕೆ ಸೀಮಿತಗೊಳ್ಳದೆ, ನಿತ್ಯಬದುಕಿನಲ್ಲಿ ಬಳಕೆಯಾಗಲಿ. ಮಾತಿಗಿಂತ ಕೃತಿ ಮೇಲು. ಕನ್ನಡ ನಾಡು ಕಟ್ಟೋಣ, ಕನ್ನಡದ ಕಂಪು ಇಳೆಗೆಲ್ಲ ತಂಪು, ಜೈಕನ್ನಡಾಂಬೆ. ಜೈ ಭುವನೇಶ್ವರಿ ಎಂಬ ಘೋಷವಾಕ್ಯಗಳ ಮೂಲಕ ಬಂದ ಅತಿಥಿಗಳ ಮುಂದೆ ಕನ್ನಡದ ಮಹತ್ವವನ್ನು ಸಾರಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.