ಮೈಸೂರು: ಇಂದು ಮೈಸೂರಿನ ದಸರಾ ಮಹೋತ್ಸವ 2022ರ ಖರ್ಚು ವೆಚ್ಚದ ಕುರಿತು ಪತ್ರಿಕಾಗೋಷ್ಠಿ ನಡೆಸಲಾಯಿತು.
ಪ್ರತಿ ವರ್ಷ ದಸರಾ ಮಹೋತ್ಸವದ ಖರ್ಚು ವೆಚ್ಚದ ಲೆಕ್ಕವನ್ನು ಮಾಧ್ಯಮದ ಮುಖಾಂತರ ಜನತೆಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ. ಈ ವರ್ಷ 21 ಉಪಸಮಿತಿಗಳು ತಡವಾಗಿ ವರದಿ ನೀಡಿದ್ದರಿಂದ ಲೆಕ್ಕದ ವಿವರ ನೀಡಲು ವಿಳಂಬವಾಗಿದೆ.
ಪ್ರಾಸ್ತಾವಿಕವಾಗಿ ವರದಿ ನೀಡಲಾಗಿದೆ. ಲೆಕ್ಕದ ವಿವರವನ್ನು ಮತ್ತೊಮ್ಮೆ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಉನ್ನತ ಮಟ್ಟದ ಸಮಿತಿಯಲ್ಲಿ ತೀರ್ಮಾನವಾದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಒಟ್ಟು15 ಕೋಟಿ ರೂ., ಪ್ರಾಯೋಜಕತ್ವದಿಂದ 32.50 ಲಕ್ಷ ರೂ., ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಮಾರಾಟದಿಂದ 76,38,819 ರೂ., ಸೇರಿ ಒಟ್ಡು 31,08,88,819 ರೂ. ಸಂಗ್ರಹವಾಗಿದೆ.
ಇದರಲ್ಲಿ ಉಪಸಮಿತಿ ಭರಿಸಲಾದ ವೆಚ್ಚ 26,54,49,058 ರೂ., ಚಾಮರಾಜನಗರಕ್ಕೆ 1 ಕೋಟಿ ರೂ., ಶ್ರೀರಂಗಪಟ್ಟಣಕ್ಕೆ 1 ಕೋಟಿ ರೂ., ಸಕಲೇಶಪುರಕ್ಕೆ 20 ಲಕ್ಷ ರೂ. ಸೇರಿ 2.20 ಕೋಟಿ ರೂ. ನೀಡಲಾಗಿದೆ. ಮಹಾರಾಣಿ ಅವರಿಗೆ 47.20 ಲಕ್ಷ ರೂ. ಸೇರಿ ಸುಮಾರು 28,74, 49,58 ರೂ. ಖರ್ಚಾಗಿದ್ದು, 1.26 ಕೋಟಿ ರೂ. ಉಳಿತಾಯವಾಗಿದೆ.
ಪ್ರತಿಯೊಂದು ಉಪಸಮಿತಿಯ ಖರ್ಚುವೆಚ್ಚದ ಕುರಿತು ನೂತನ ಜಿಲ್ಲಾಧಿಕಾರಿಗಳಿಂದ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ. ಸದ್ಯ 21 ಉಪಸಮಿತಿಯಿಂದ ಪ್ರಸ್ತಾವಿಕವಾಗಿ ನೀಡಲಾಗಿದೆ. ಜಿಲ್ಲಾಧಿಕಾರಿಗಳು ವಿವರವಾಗಿ ಮತ್ತೊಮ್ಮೆ ಪರಿಶೀಲನೆ ನಡೆಸಲಿದ್ದಾರೆ.
ವಿದ್ಯುತ್ ದೀಪಾಲಂಕಾರಕ್ಕೆ ಹಣ ಪಾವತಿಸಿಲ್ಲ. ದೀಪಾಲಂಕಾರ ಪ್ರಾಯೋಜಕತ್ವದ ಹಣ ಕೂಡ ಚೆಸ್ಕಾಂಗೆ ಹೋಗುತ್ತದೆ. ಒಟ್ಟಾರೆ ದಸರಾ ಮಹೋತ್ಸವದಲ್ಲಿ 28,74, 49,58 ರೂ. ಖರ್ಚಾಗಿದ್ದು, 1.26 ಕೋಟಿ ರೂ. ಉಳಿತಾಯವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಸದರಾದ ಪ್ರತಾಪ್ ಸಿಂಹ, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ, ಜಿಪಂ ಸಿಇಒ ಪೂರ್ಣಿಮಾ, ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ ಸೇರಿದಂತೆ ನಾನಾ ನಿಗಮ ಮಂಡಳಿಗಳ ಅಧ್ಯಕ್ಷರು, ಅಧಿಕಾರಿಗಳು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.