ಬೆಂಗಳೂರು: ಕೆಎಸ್ಆರ್ಟಿಸಿ ಬಸ್ನಲ್ಲಿ 30 ಕೆಜಿಯವರೆಗೆ ಲಗೇಜ್ ಸಾಗಣೆ ಇನ್ನು ಮುಂದೆ ಉಚಿತ. 30 ಕೆಜಿವರೆಗಿನ ತೂಕದ ವೈಯಕ್ತಿಕ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದು ಎಂದು ಬಸ್ಗಳಲ್ಲಿ ಲಗೇಜ್ ಸಾಗಾಟ ಕುರಿತ ಪರಿಷ್ಕೃತ ಸುತ್ತೋಲೆಯಲ್ಲಿ KSRTC ಸಿಬ್ಬಂದಿ ಮತ್ತು ಜಾಗೃತ ದಳದ ನಿರ್ದೇಶಕರು ತಿಳಿಸಿದ್ದಾರೆ.
ದೂರದ ಪ್ರದೇಶಗಳಿಗೆ ಪ್ರಯಾಣಿಸಬೇಕಾದರೆ KSRTC ಬಸ್ಸುಗಳನ್ನು ಜನರು ಹೆಚ್ಚು ಅಲವಂಬಿಸಿರುತ್ತಾರೆ. ದೊಡ್ಡ ದೊಡ್ಡ ಲಗೇಜ್ ಕೊಂಡೊಯ್ಯುವುದು ಕೂಡ ಅವರಿಗೆ ಅನಿವಾರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನಿರ್ಧಾರ ಹೆಚ್ಚು ಪ್ರಯೋಜನಕಾರಿಯಾಗಿದೆ.
ಹಿಂದೆ KSRTC ಬಸ್ಸುಗಳಲ್ಲಿ ಇಷ್ಟೇ ತೂಕದ ಲಗೇಜ್ಗಳನ್ನು ತೆಗೆದುಕೊಂಡು ಹೋಗಬೇಕು ಎಂಬ ನಿಯಮಗಳು ಇರಲಿಲ್ಲ, ಈ ಬಗ್ಗೆ ಗೊಂದಲುಗಳು ಇತ್ತು. ಇದೀಗ ಗೊಂದಲಕ್ಕೆ ತೆರೆ ಬಿದ್ದಿದೆ.
ಬ್ಯಾಗ್, ಸೂಟ್ ಕೇಸ್, ಅಕ್ಕಿ, ತೆಂಗಿನಕಾಯಿ, ರಾಗಿ, ಅಕ್ಕಿ ಹಿಟ್ಟು, ತರಕಾರಿ, ಹೂ ಹಣ್ಣು, ಸಣ್ಣದಾದ ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಬಸ್ನಲ್ಲಿ ಸಾಗಾಟ ಮಾಡಬಹುದಾಗಿದೆ.
ಇನ್ನು KSRTC ಬಸ್ಸುಗಳಲ್ಲಿ ಶ್ವಾನವನ್ನು ಕರೆದುಕೊಂಡು ಹೋದರೆ ಅದಕ್ಕೆ ಫುಲ್ ಟಿಕೆಟ್ ನೀಡಬೇಕು. ನಾಯಿಮರಿಗಳಿಗೆ ಅರ್ಧ ಟಿಕೆಟ್ ನೀಡಬೇಕು ಎಂದು ಸೂಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.