ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಶ್ರೀ ಚಂದ್ರಶೇಖರ ಭಂಡಾರಿ ಅವರು ಇಂದು ಅಪರಾಹ್ನ ಬೆಂಗಳೂರಿನಲ್ಲಿ ನಿಧನಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಮೂಲತಃ ಮಂಗಳೂರಿನವರಾದ ಭಂಡಾರಿಗಳು ಸಂಘದ ಎರಡೂ ಪ್ರಾಂತಗಳ ಪ್ರಚಾರ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಪಾವಧಿಯ ಕಾಲ ಅವರ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿ ಆಗಿಯೂ ಜವಾಬ್ದಾರಿಯನ್ನು ಹೊಂದಿದ್ದರು.
ಅನುವಾದಿತ ಕೃತಿಗಳು, ವ್ಯಕ್ತಿಪರಿಚಯದ ಕೃತಿಗಳು, ವೈಚಾರಿಕ ಕೃತಿಗಳು ಹೀಗೆ ಹಲವು ಕೃತಿಗಳ ಕರ್ತೃ ಅವರಾಗಿದ್ದರು. ಅಂಬೇಡ್ಕರ್ ಕುರಿತು ಪುಸ್ತಕ ಬರೆದಿದ್ದಲ್ಲದೆ ದತ್ತೋಪಂತ ಠೇಂಗಡಿಯವರು ಬರೆದ ಅಂಬೇಡ್ಕರ್ ಕುರಿತಾದ ಬೃಹತ್ ಕೃತಿಯನ್ನು ಕನ್ನಡಿಸಿದ್ದರು. ಇದಕ್ಕೆ ಉತ್ತಮ ಅನುವಾದ ಕೃತಿ ಎಂದು ಅಕಾಡೆಮಿ ಪ್ರಶಸ್ತಿಯೂ ಲಭಿಸಿತ್ತು.
‘ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು..’ ಈ ಹಾಡು ಅವರದೇ ಲೇಖನಿಯಿಂದ ಮೂಡಿಬಂದುದು. ಹೀಗೆ ಕವಿಯೂ ಆಗಿದ್ದ ಅವರ ಬೌದ್ಧಿಕಗಳು ಆಳವಾದ ವಿಮರ್ಶೆ ಚಿಂತನೆಗಳಿಂದ ಕೂಡಿರುತ್ತಿದ್ದವು.
https://youtu.be/STFIFN9mqLk
ಇದು ಅವರ ಬರೆದ ಹಾಡಿನ ಕೊಂಡಿ.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಅವರ ಆತ್ಮಕ್ಕೆ ಸದ್ಗತಿಯನ್ನು ಕೋರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.